ಬಸ್ ನಲ್ಲಿ ಕೋಳಿ ಮಾಂಸ ಹಿಡಿದುಕೊಂಡ ಪ್ರಯಾಣಿಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಚಾಲಕ

Monday, October 16th, 2023
ksrtc-chicken

ಬಂಟ್ವಾಳ : ಕೋಳಿ ಮಾಂಸ ಹಿಡಿದುಕೊಂಡು ಪ್ರಯಾಣಿಕನೋರ್ವ ಬಸ್ ಹತ್ತಿದ ಕಾರಣಕ್ಕಾಗಿ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದುದಲ್ಲದೆ, ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡ ಬಸ್ಸನ್ನು ನೇರವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಂದ ಘಟನೆ ನಡೆದಿದೆ. ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ – ಪುತ್ತೂರು ನಡುವೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಸುರೇಶ್ ಎಂಬವರು ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್ […]

ಬ್ರಾಂಡ್ ಇಲ್ಲದ ಟಿವಿಗಳಿಗೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಯ ಸ್ಟಿಕರ್​ ಅಂಟಿಸಿ ಮಾರಾಟ, ಒಬ್ಬನ ಬಂಧನ

Tuesday, July 7th, 2020
suresh

ಬೆಂಗಳೂರು : ಬ್ರಾಂಡ್ ಇಲ್ಲದ  ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಯ ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದ ಖದೀಮನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸುರೇಶ್ ‌ಬಂಧಿತ ಆರೋಪಿ. ಈತ ಸಾಧಾರಣ ಟಿವಿಗಳನ್ನ ಖರೀದಿ ಮಾಡಿ ಅದಕ್ಕೆ ಸೋನಿ ‌ಕಂಪನಿ ಸ್ಟಿಕರ್, ‌ಸ್ಯಾಂಮ್ ಸಂಗ್ ಕಂಪನಿ ಸ್ಟಿಕರ್ ಅಂಟಿಸಿ ಅಸಲಿ ಟಿವಿ ಗಳಂತೆ ಬಿಂಬಿಸಿ ಅಧಿಕ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಚಾರ ತಿಳಿದು ಕಂಪನಿ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.ಸಿಸಿಬಿ ಪೊಲೀಸರು ದೂರಿನ ಆಧಾರದ […]

23 ಗರ್ಲ್‌ಫ್ರೆಂಡ್ಸ್‌, 4 ಮದುವೆ, ಹೆಂಗೆ ಮೈಂಟೈನ್ ಮಾಡ್ತಿದ್ದ ಈ ಆಸಾಮಿ ನೋಡಿ

Wednesday, June 10th, 2020
suresha

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಮಹಾ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಾನು 4 ಮದುವೆಯಾಗಿದ್ದೇನೆ. 23 ಗರ್ಲ್‌ಫ್ರೆಂಡ್ಸ್‌ನ ಮೇಂಟೇನ್ ಮಾಡ್ತಿದ್ದೀನಿ ಅಂತ ಈತ ಹೇಳಿಕೊಂಡಿದ್ದಾನೆ, ಮೈಸೂರು ಮೂಲದ ಸುರೇಶ್‌ ವಿಚ್ಚೇಧಿತ ಮಹಿಳೆಯೊಬ್ಬರ ಬಳಿ ಹೋಗಿದ್ದ ಈತ ನಿನಗೆ ಬಾಳು ಕೊಡ್ತೇನೆ ಒಂದು ನನಗೆ ಒಂದು  ಸೈಟ್ ಕೊಡ್ಸು ಅಂದಿದ್ದ.  ಅದಕ್ಕೆ 10 ಲಕ್ಷ ಕೊಡು ಅಂತಾ ಬೇಡಿಕೆ ಇಟ್ಟಿದ್ನಂತೆ. ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಹಣ ಇಲ್ಲ, ಒಡವೆಗಳಿವೆ ಅದನ್ನು […]

ಬೆಳ್ತಂಗಡಿಯಲ್ಲಿ ಮಧ್ಯರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Thursday, November 22nd, 2018
attacked

ಬೆಳ್ತಂಗಡಿ: ಮಧ್ಯರಾತ್ರಿ ಯುವಕನೊಬ್ಬನ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಗುಳಿಗಕಟ್ಟೆ ಮುಂದೆ ನಡೆದಿದೆ. ಗದಗ ಜಿಲ್ಲೆಯ ಸುರೇಶ್ (27) ಹಲ್ಲೆಗೊಳಗಾದ ವ್ಯಕ್ತಿ. ಇವರು ಉಜಿರೆಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇವರ ಕೈ ಕಾಲಿಗೆ ಗಂಭೀರ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ಏನು ಮತ್ತು ಹಲ್ಲೆ ಮಾಡಿದವರು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ […]

ಮಕ್ಕಳ ಶಿಕ್ಷಣಕ್ಕಾಗಿ ಬದುಕನ್ನೇ ಮುಡಿಪಿಟ್ಟ ಆದರ್ಶ ಗುರು… ಹೆಮ್ಮೆ ಪಡುತ್ತಿದೆ ಶಿಷ್ಯ ಸಮೂಹ

Monday, April 2nd, 2018
education

ಮಂಗಳೂರು: ಮಾತೃದೇವೋ ಭವ, ಪಿತೃದೇವೋ ಭವ ಮತ್ತು ಗುರುದೇವೋ ಭವ. ಅಂದರೆ ಹುಟ್ಟಿದ ಕೂಡಲೇ ನಮಗೆ ಎಲ್ಲವನ್ನೂ ಕಲಿಸುವ ತಾಯಿ, ಹುಟ್ಟಿದಂದಿನಿಂದಲೇ ಪಾಲನೆಯ ಜವಾಬ್ದಾರಿ ಹೊರುವ ತಂದೆ ಜೊತೆಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಮಕ್ಕಳನ್ನು ತಿದ್ದಿ ತೀಡುವ ಗುರು ಈ ಮೂವರೂ ಕೂಡ ದೇವರ ಸಮಾನರು ಎನ್ನುವ ನಂಬಿಕೆ ನಮ್ಮಲ್ಲಿದೆ. ಅದರಲ್ಲೂ ಈ ಪೈಕಿ ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ತಿದ್ದಿ, ತೀಡಿ ಅವರನ್ನು ಪ್ರಜ್ಞಾವಂತ ನಾಗರಿಕರು, ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ಇರುವ ಗುರುವಿನ ಸ್ಥಾನ ಮಹತ್ವದ್ದು. […]

ನಕ್ಸಲ್ ತಂಡ ಪತ್ತೆ, ಪೊಲೀಸರಿಂದ ಕೂಂಬಿಕ್ ಕಾರ್ಯಾಚರಣೆ

Tuesday, January 16th, 2018
naksalate

ಮಂಗಳೂರು: ದಕ್ಷಿಣಕನ್ನಡ ಕಾಡಂಚಿನಲ್ಲಿ ಮತ್ತೆ ನಕ್ಸಲರ ಪ್ರತ್ಯಕ್ಷರಾಗಿದ್ದಾರೆ. ನಿನ್ನೆ ಪುತ್ತೂರು ತಾಲೂಕಿನ ಅಡ್ಡಹೊಳೆ ಎಂಬಲ್ಲಿ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಪತ್ತೆಯಾಗಿದೆ.ಈ ಹಿಂದೆ ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮಹಾರಾಷ್ಟ್ರದಲ್ಲಿ 5 ಮಹಿಳೆಯರು ಸೇರಿದಂತೆ 7 ನಕ್ಸಲರ ಹತ್ಯೆ ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ತಂಡ ಹಾಗೂ ಎಎನ್ ಎಫ್ ತಂಡ ಅಡ್ಡಹೊಳೆ ಪ್ರದೇಶಕ್ಕೆ ತೆರಳಿ ತನಿಖೆ ಆರಂಭಿಸಿವೆ. […]