ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ 15 ರಾಜ್ಯಗಳಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ; 137 ಸ್ಥಳಗಳಲ್ಲಿ ಸರಕಾರಕ್ಕೆ ಮನವಿ !

Tuesday, October 19th, 2021
HJJ

ಮಂಗಳೂರು : ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ ಭಾರತ ಮತ್ತು ಬಾಂಗ್ಲಾದೇಶದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನಗಳನ್ನು ನಡೆಸಿತು. ಇದರಲ್ಲಿ ಜಿಹಾದಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯಾಗಬೇಕು, ಎಂಬ ಬೇಡಿಕೆಗಾಗಿ ಬಾಂಗ್ಲಾದೇಶ, ಅದೇರೀತಿ ಭಾರತದ ನವದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಗೋವಾ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮಗಳಲ್ಲಿ ಬಂಗಾಳ, ಮೇಘಾಲಯ, ಅಸ್ಸಾಂ ಮತ್ತು ತ್ರಿಪುರಾ, ಒಡಿಶಾ ಈ 15 ರಾಜ್ಯಗಳಲ್ಲಿನ ಹಿಂದೂಗಳು ಭಾಗವಹಿಸಿದ್ದರು. […]

ಅಮಾಯಕ ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರ ಸಹಿಸಲು ಸಾಧ್ಯವಿಲ್ಲ : ಕಾರ್ಕಳ ಬಿಜೆಪಿ

Saturday, September 11th, 2021
Pragathi Center

ಕಾರ್ಕಳ   : ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಿ ಮತಾಂತರ ಮಾಡುವ ಆರೋಪಗಳು ಕಾರ್ಕಳದ ವಿವಿಧೆಡೆ ಕಂಡು ಬರುತ್ತಿದೆ, ಇತ್ತೀಚೆಗೆ ಮಿಷನರಿಗಳ ಕುಕೃತ್ಯ ಮಿತಿಮೀರಿದ್ದು ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ನಡೆಸಿ ಹಿಂದೂಗಳ ಸಹನೆಯನ್ನ ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಒಂದೆಡೆಯಲ್ಲಿ ಮತಾಂತರ ಮತ್ತೊಂದು ಕಡೆ ಗೋಕಳ್ಳತನ ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ ಇದು ತಕ್ಷಣ ನಿಲ್ಲಬೇಕು ಇಲ್ಲವಾದಲ್ಲಿ, ಇಂತಹ ಕೃತ್ಯಗಳು ಮುಂದೆ ಸಾಮಾಜಿಕ ಅಶಾಂತಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಕೃತ್ಯಗಳನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಸಾಮಾಜಿಕ ಶಾಂತಿ ಕದಡುವ […]

ಅಜಾನ್ ಮೂಲಕ ಲ್ಯಾಂಡ್ ಜಿಹಾದ್, ಇದು ಹಿಂದೂಗಳನ್ನು ಹತ್ತಿಕ್ಕುವ ಯತ್ನ

Tuesday, April 20th, 2021
ajan

ಮಸೀದಿಯಲ್ಲಿ ಅನಧಿಕೃತ ಧ್ವನಿವರ್ಧಕದ ಸಮಸ್ಯೆ, ಇದು ಕೇವಲ ಧ್ವನಿಮಾಲೀನ್ಯಕ್ಕೆ ಮಾತ್ರ ಸೀಮಿತವಲ್ಲ, ಇದು ಹಿಂದೂಗಳನ್ನು ಹತ್ತಿಕ್ಕುವ ‘ಲ್ಯಾಂಡ್ ಜಿಹಾದ್’ ! – ಶ್ರೀ. ಸಂತೋಷ ಪಾಚಲಗ, ಅರ್ಜಿದಾರ ‘ಮುಂಬಯಿಯ ಕಪಾಡಿಯಾನಗರ(ಕುರ್ಲಾ) ಇಲ್ಲಿ ಶೇ. 50 ರಷ್ಟು ಹಿಂದೂಗಳು ವಾಸವಾಗಿದ್ದಾರೆ. ಇಲ್ಲಿ ಅನೇಕ ಮಸೀದಿಯ ಮೇಲೆ ಅನಧಿಕೃತವಾಗಿ ಧ್ವನಿವರ್ಧಕವನ್ನು ಅಳವಡಿಸಿ ಅದರಿಂದ ಕರ್ಕಶವಾದ ಧ್ವನಿಯಲ್ಲಿ ಆಜಾನ ನೀಡಲು ಆರಂಭವಾಗಿದೆ. ಸತತವಾಗಿ ತೊಂದರೆಯಿಂದ ಬೇಸತ್ತ ಇಲ್ಲಿಯ ಹಿಂದೂಗಳು ತಮ್ಮ ಮನೆಮಾರುಗಳನ್ನು ಮುಸಲ್ಮಾನರಿಗೆ ಮಾರಿ ಹೋಗಿದ್ದಾರೆ. ಇಂದು ಇಲ್ಲಿ ಕೇವಲ ಶೇ. 3 […]

ಅತ್ತಾವರ ದೈವಸ್ಥಾನದ ಹುಂಡಿಯಲ್ಲಿ“ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟು ಪತ್ತೆ

Sunday, January 3rd, 2021
note

ಮಂಗಳೂರು  : ಅತ್ತಾವರದಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ದುಷ್ಕರ್ಮಿಗಳು ಪ್ರವೇಶಿಸಿ ದೇವರ ಹುಂಡಿಯಲ್ಲಿ “ಪ್ರಭು ಏಸು ಕ್ರಿಸ್ತನು ಮಾತ್ರ ಆರಾಧನೆ ಹೊಂದಲು ಸೂಕ್ತ ವ್ಯಕ್ತಿ”, “ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟುಗಳನ್ನು ಹಾಕಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋಯಿಸುವ ದುರುದ್ದೇಶದಿಂದಲೇ ಈ ರೀತಿ ದುಷ್ಕೃತ್ಯ ಮಾಡಲಾಗಿದೆ, ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಇಂತಹ ಘಟನೆಗಳು ನಡೆದಿದ್ದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳು ಧ್ವನಿ ಎತ್ತುತ್ತವೆ. ಈ ಸಂದರ್ಭದಲ್ಲಿಯೂ ಸರ್ಕಾರವು ದುಷ್ಕರ್ಮಿಗಳ […]

ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲು, ಹಿಂದೂಗಳು ಸಂಘಟಿತರಾಗಬೇಕು ! – ರಾಹುಲ ಕೌಲ್

Saturday, August 8th, 2020
Rahul_Kaul

ಮಂಗಳೂರು : ಕಲಂ 370 ರದ್ದು ಪಡಿಸಿದ ನಂತರ ದೇಶದಾದ್ಯಂತ ಹಿಂದೂಗಳಿಗೆ ನೆಮ್ಮದಿ ಸಿಕ್ಕಿದರೂ, ಜಿಹಾದಿ ಭಯೋತ್ಪಾದಕರು ತದನಂತರ 22 ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. 1990 ರಲ್ಲಿ ಕಾಶ್ಮೀರಿ ಹಿಂದೂಗಳ ವಂಶನಾಶದಂತೆ ಇಂದಿಗೂ ನಡೆಯುತ್ತಿದೆ. ಹೀಗಾದರೆ ಹಿಂದೂಗಳ ಪುನರ್ವಸತಿ ಹೇಗಾಗಬಹುದು ? ಇದನ್ನು ತಡೆಗಟ್ಟಲು ಕೇಂದ್ರ ಸರಕಾರವು ‘ಕಾಶ್ಮೀರಿ ಹಿಂದೂಗಳ ವಂಶನಾಶವಾಗಿದೆ’, ಎಂಬುದನ್ನು ಕಾನೂನು ಮಾಡಿ ಪ್ರಪ್ರಥಮವಾಗಿ ಒಪ್ಪಿಕೊಳ್ಳಬೇಕು. ನಾವು ಈ ಬಗ್ಗೆ ‘ಪನೂನ್ ಕಾಶ್ಮೀರ ದೌರ್ಜನ್ಯ ಹಾಗೂ ನರಸಂಹಾರ ನಿರ್ಮೂಲನೆ ವಿಧೇಯಕ 2020’ […]

ಕೊರೋನಾ ನಿಯಮಗಳನ್ನು ಪಾಲಿಸಲು ರಸ್ತೆಯಲ್ಲಿಯೇ ಮದುವೆ ಮಾಡಿಕೊಂಡ ಜೋಡಿ

Wednesday, July 22nd, 2020
ಕೊರೋನಾ ನಿಯಮಗಳನ್ನು ಪಾಲಿಸಲು ರಸ್ತೆಯಲ್ಲಿಯೇ ಮದುವೆ ಮಾಡಿಕೊಂಡ ಜೋಡಿ

ಚಾಮರಾಜನಗರ : ಕೇರಳದ ವರ ಮತ್ತು ಶಿವಮೊಗ್ಗ ಜಿಲ್ಲೆಯ ವಧು ಈ ಜಿಲ್ಲೆಯ ಮೂಲೆಹೋಲ್ ಚೆಕ್ ಪೋಸ್ಟ್ ಬಳಿ  ರಸ್ತೆಯಲ್ಲಿಯೇ ಪರಸ್ಪರ ಹೂಮಾಲೆ ಬದಲಾಯಿಕೊಂಡು ಕೊರೋನಾ ನಿಯಮಗಳನ್ನು ಉಲ್ಲಂಘಿಸದಂತೆ ಮದುವೆ ಮಾಡಿಕೊಂಡರು. ಕೇರಳದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುವ ಚಾಮರಾಜನಗರ ಜಿಲ್ಲೆಯ ಗುಂಡಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಅಭಯಾರಣ್ಯದಲ್ಲಿರುವ ಕರ್ನಾಟಕ ಗಡಿಯ ಮೂಲೆಹೋಲ್‌ನಲ್ಲಿ ಜುಲೈ 21 ರ ಮಂಗಳವಾರ ಈ ಮದುವೆ ನಡೆಯಿತು. ಮಂಗಳವಾರ ಮಧ್ಯಾಹ್ನ, ಇಬ್ಬರು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ವರನು ಮಂಗಳಸೂತ್ರವನ್ನು ಹುಡುಗಿಯ ಕುತ್ತಿಗೆಗೆ ಕಟ್ಟಿದನು. ಕರೋನಾ ನಿಯಮವನ್ನು ಉಲ್ಲಂಘಿಸದಿರಲು […]

‘ಶ್ರಾವಣ ಸೋಮವಾರದ ವ್ರತವನ್ನು ಹೇಗೆ ಆಚರಿಸಬಹುದು ?

Monday, July 20th, 2020
sravana

ಮಂಗಳೂರು  :  ಸದ್ಯ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರ ನಿರ್ಬಂಧವನ್ನು (ಲಾಕ್‌ಡೌನ್) ವಿಧಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಕೊರೋನಾ ಸೋಂಕು ಕಡಿಮೆಯಿದ್ದರೂ, ಜನರು ಮನೆಯಿಂದ ಹೊರಗೆ ಬರಲು ಅನೇಕ ನಿರ್ಬಂಧಗಳು ಇದ್ದೇ ಇವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ, ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿರ್ಬಂಧಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವೊಂದು ಪರ್ಯಾಯಗಳನ್ನು ತಿಳಿಸಿದೆ. ಇದನ್ನು ‘ಆಪದ್ಧರ್ಮ ಎಂದು […]

ಎರಡು ತಿಂಗಳ ಮಗುವನ್ನು ಬಲಿ ಪಡೆದ ಕೊರೋನಾ, ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ‌ ಅಂತ್ಯಸಂಸ್ಕಾರ

Saturday, July 18th, 2020
kodimbala

ಮಂಗಳೂರು : ಆ ಪುಟ್ಟ ಮಗುವನ್ನೂ ಬಿಡಲಿಲ್ಲ ಕೊರೋನಾ, ಮಗು ಹುಟ್ಟಿ ಕೇವಲ ಎರಡೇ ತಿಂಗಳು, ಇನ್ನಷ್ಟೇ  ಪ್ರಪಂಚ ನೋಡಬೇಕಿತ್ತು. ಆದರೆ ಆ ಮಗುವಿಗೆ ದೈತ್ಯ  ಕೊರೋನಾ ದ ಜೊತೆ ಹೋರಾಡಲು ಸಾಧ್ಯವಾಗಲೇ ಇಲ್ಲ. ಕೊರೋನಾ ತನ್ನ ಮನೆಯವರನ್ನು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು  ಬಿಡಲಿಲ್ಲ ಕೊನೆಗೆ ಮಗುವಿನ ಅಂತ್ಯಸಂಸ್ಕಾರ ವನ್ನು ಬಜರಂಗದಳದ ಕಾರ್ಯಕರ್ತರು ನಡೆಸಬೇಕಾಯಿತು. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ […]

ಖಾದರ್ ಅವರ ಬೆಂಕಿ ಹಚ್ಚುವ ಹೇಳಿಕೆಯಿಂದ ಮಂಗಳೂರಲ್ಲಿ ಗಲಭೆ ನಡೆದಿದೆ : ಸದಾನಂದಗೌಡ

Friday, December 20th, 2019
curfew

ಮಂಗಳೂರು : ಯು.ಟಿ.ಖಾದರ್ ಅವರ ಬೆಂಕಿ ಹಚ್ಚುವ ಹೇಳಿಕೆಯಿಂದ ಮಂಗಳೂರು ಗಲಭೆ ಉಂಟಾಗಲು ಕಾರಣವಾಗಿದೆ ಎಂದು ಕೇಂದ್ರ ಡಿ.ವಿ.ಸದಾನಂದಗೌಡ ಹೇಳಿದರು. ಕಾಂಗ್ರೆಸ್ ಹಾಗೂ ಯು.ಟಿ.ಖಾದರ್ ಅವರು ತಮ್ಮ ಅಸ್ತಿತ್ವಕ್ಕಾಗಿ ಇಂತವರನ್ನು ಸಣ್ಣ ಪುಟ್ಟ ಗಲಾಟೆಯಾದರೂ ಕರೆಸಿಕೊಳ್ಳುತ್ತಾರೆ ಎಂದರು. ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮೂರು ಇಸ್ಲಾಮಿಕ್ ರಾಷ್ಟ್ರಗಳು, ಆದರೆ ಭಾರತ ಮಾತ್ರ ಸರ್ವ ಧರ್ಮಗಳ ರಾಷ್ಟ್ರವಾಗಿದೆ ಎಂದು ತಿಳಿಸಿದರು. 1971 ರ ಯುದ್ದದ ಬಳಿಕ ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮ ನಡೆದುಹೋಯಿತು, ಅನೇಕ ಹಿಂದೂಗಳು ನಿರಾಶ್ರಿತರಾದರು ಭಾರತ ಅಂತವರಿಗೆ […]

ಹಿಂದೂಗಳ ಹತ್ಯೆ ಮಾಡಿದ ಮತಾಂಧ ಟಿಪ್ಪುವಿನ ಜಯಂತಿ ರದ್ದುಗೊಳಿಸಿ !

Friday, November 9th, 2018
Tippu

ಮಂಗಳೂರು : ಒಂದು ವೇಳೆ ಟಿಪ್ಪ್ಪು ಜಯಂತಿ ಹೀಗೆಯೇ ಮುಂದುವರಿದರೆ, ನಾಳೆ ಅಕ್ಬರ, ಬಾಬರ, ಅಫಜಲಖಾನ ಇವರ ಜಯಂತಿಗಳೂ ಪ್ರಾರಂಭವಾಗಿ ಭಾರತವು ಇಸ್ಲಾಮೀಕರಣವಾಗಲು ಆರಂಭವಾಗಬಹುದು ! ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆರಿಸಲಾಗುತ್ತಿದೆ. ಈಗ ಇದೇ ಟಿಪ್ಪುವಿನ ಜಯಂತಿ ಕೇವಲ ಕರ್ನಾಟಕದಲ್ಲಿಯಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಪ್ರಾರಂಭವಾಗಿವೆ. ಯಾರು ಮೂಲ ಹಿಂದೂ ಹೆಸರಿರುವ ಮೈಸೂರನ್ನು ಬದಲಾಯಿಸಿ ಇಸ್ಲಾಮಿ ರಾಜ್ಯವೆಂದು ಟಿಪ್ಪು ಘೋಷಿಸಿದನೋ, ರಾಜ್ಯದ ಎಲ್ಲ ಕಾಫೀರರನ್ನು (ಮುಸಲ್ಮಾನೇತರರನ್ನು) ಮತಾಂತರಗೊಳಿಸಿ ಮುಸಲ್ಮಾನರನ್ನಾಗಿ ಮಾಡುತ್ತೇನೆಂದು ಪ್ರತಿಜ್ಞೆ […]