ಆಗಸ್ಟ್ 21ರಂದು ಗೌರಿ ಹಬ್ಬ, ಶನಿವಾರ ಗಣೇಶೋತ್ಸವ; ಆದರೆ ಸಂಭ್ರಮವಿಲ್ಲ

Friday, August 21st, 2020
ganeshaotsava

ಮಂಗಳೂರು  :  ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಗಣೇಶೋತ್ಸವದ ತಯಾರಿ ಸಂಭ್ರಮವಿಲ್ಲ. ತರಕಾರಿ, ಕಬ್ಬು ಹೂ ಹಣ್ಣುಗಳ ಬೇಡಿಕೆಗಳು ಕಡಿಮೆಯಾಗಿದೆ. ಮಂಗಳೂರು ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನೆ ಏಳು ದಿನದ ಕಾಲ ಆಚರಿಸುತ್ತಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಅನುಮತಿ ಇಲ್ಲದೆ ಇರುವುದರಿಂದ ಸರಳವಾಗಿ ಬಾಳಂಭಟ್ಟ ಹಾಲಿನಲ್ಲಿ ಕೇವಲ ಒಂದೇ ದಿನ ಆಚರಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಮಂಗಳಾದೇವಿ ಗಣೇಶೋತ್ಸವ ಸಮಿತಿ , ಕೆಏಸ್ಆರ್ಟಿಸಿ, ಪೊಲೀಸ್ ಲೈನ್,  ಸಿದ್ಧಿವಿನಾಯಕ ಪ್ರತಿಷ್ಠಾನಗಳಲ್ಲೂ ಸರಳವಾಗಿ ಒಂದೇ ದಿನ ಆಚರಿಸಲಾಗುತ್ತಿದೆ. ಸಂಘನಿಕೇತನದಲ್ಲಿ ಸರಳವಾಗಿ […]

ಡಿಸೆಂಬರ್ 23ರಿಂದ 30 ರ ವರೆಗೆ ಕುಲಶೇಖರ ಮೇಗಿನ ಮನೆ ಗದ್ದೆಯಲ್ಲಿ ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ

Wednesday, December 19th, 2018
Shanyeswara Yaga

ಮಂಗಳೂರು : ಹಿಂದೂ ಯುವ ಸೇನೆ ಪದವು ಶಾಖೆ ವತಿಯಿಂದ ಕುಲಶೇಖರ ಮೇಗಿನ ಮನೆ ಬಳಿಯ ಎದುರಿನ ವಿಶಾಲವಾದ ಸ್ಥಳದಲ್ಲಿ ಡಿಸೆಂಬರ್ 23ರಿಂದ 30 ರ ವರೆಗೆ ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ  ನಡೆಯಲಿದೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ  ಮೋನಪ್ಪ ಭಂಡಾರಿ ಹೇಳಿದ್ದಾರೆ. ಯಾಗ ನಡೆಯುವ ಕುಲಶೇಖರ ಮೇಗಿನ ಮನೆ ಬಳಿಯ ಚಪ್ಪರದಲ್ಲಿ ಮಾತನಾಡಿದ ಅವರು  ಪೂರ್ವಭಾವಿಯಾಗಿ ಡಿ.23ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶನಿದೇವರ ವಿಗ್ರಹ ಮತ್ತು ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ ಎಂದು ಹೇಳಿದರು. ಡಿ.29 ರಂದು […]

ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಹಿಂದೂ ಯುವ ಸೇನೆ ಪ್ರತಿಭಟನೆ

Friday, January 3rd, 2014
Hindu yuva sene

ಮಂಗಳೂರು: ಹಿಂದೂ ಯುವ ಸೇನೆಯ ವತಿಯಿಂದ ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ದೇರಳಕಟ್ಟೆಯಲ್ಲಿ ನಡೆದ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗಳ ಮೇಲೆ ಗೂಂಡ ಕಾಯ್ದೆಯನ್ನು ಹೇರಿ ಮರಣದಂಡನೆ ಶಿಕ್ಷೆ ವಿಧಿಸಬೇಕು. ದೇರಳಕಟ್ಟೆ ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ […]