ಕೊರೊನಾ ನಿಯಮ ನಿರ್ಲಕ್ಷ್ಯ ; ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ದೂರು ದಾಖಲು

Tuesday, April 20th, 2021
Ullal Police

ಉಳ್ಳಾಲ:   ಸರ್ಕಾರದ ಆದೇಶ ಉಲ್ಲಂಘಿಸಿ ದೇವಸ್ಥಾನದ ಜಾತ್ರೋತ್ಸವ ನಡೆಸಿದೆ ಎಂಬ ಆರೋಪದ ಮೇರೆಗೆ ಉಳ್ಳಾಲದ ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮೇಶ್ವರ ದೇವಸ್ಥಾನದಲ್ಲಿ ಈಗ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದ್ದು, ಸರ್ಕಾರದ ಆದೇಶ ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ನಿನ್ನೆ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಈ ಕುರಿತು […]

ಮದುವೆಯಲ್ಲೂ ಹೊರೆ ಕಾಣಿಕೆ, ಫಸ್ಟ್‌‌ ನೈಟ್‌ಗೂ ಅಡ್ಡಿ…ಫ್ರೆಂಡ್ಸ್‌‌ ಕುಚೇಷ್ಟೆಗೆ ನವದಂಪತಿ ಸುಸ್ತು!

Thursday, March 1st, 2018
marriege

ಮಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆಯ ದೊಡ್ಡ ಸಂಭ್ರಮಗಳಲ್ಲಿ ಊರವರು ಕೊಡುಗೆಯಾಗಿ ಹೊರೆ ಕಾಣಿಕೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ, ಮದುವೆಗೂ ಹೊರೆ ಕಾಣಿಕೆ ಸಲ್ಲಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ರಾಕೇಶ್ ಅವರ ಮದುವೆ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಫೆ.20ರಂದು ನಡೆದಿದೆ. ಮದುಮಕ್ಕಳಿಗೆ ಏನಾದರೂ ಸರ್‌‌ಪ್ರೈಸ್ ಗಿಫ್ಟ್ ನೀಡಲೇಬೇಕು ಎಂದುಕೊಂಡಿದ್ದ ರಾಕೇಶ್ ಗೆಳೆಯರು ಈ ರೀತಿ ಮಾಡಿದ್ದಾರೆ. ಇವರ ಕೀಟಲೆಗೆ ಮದುಮಗಳು ಸುಷ್ಮಾ ಕೂಡಾ ದಂಗಾಗಿದ್ದಾರೆ. ಮದುಮಗ […]