ಕೇರಳ ರಾಜ್ಯದಲ್ಲಿ ಜೂ.12 ಮತ್ತು 13ರಂದು ಸಂಪೂರ್ಣ ಲಾಕ್ ಡೌನ್

Friday, June 11th, 2021
Kerala Lockdown

ಕಾಸರಗೋಡು : ಕೇರಳ ಸರಕಾರ, ರಾಜ್ಯದಲ್ಲಿ ಜೂ.16ರ ವರೆಗೆ ಲಾಕೌ ಡೌನ್ ವಿಸ್ತರಿಸಿದೆ. ಈ ನಡುವೆ ಜೂ.12 ಮತ್ತು 13ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುವಾಗ ಹೋಟೆಲ್ ಗಳಲ್ಲಿ ಪಾರ್ಸೆಲ್ ಆಗಿ ತಿಂಡಿತಿನಿಸುಗಳನ್ನು ಮಾರಾಟ ಮಾಡುಲು ಅವಕಾಶವಿಲ್ಲ . ಆದರೆ ಹೋಂ ಡೆಲಿವರಿಗೆ ಅವಕಾಶವಿರಲಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ  ಅನುಮತಿ ಇದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.  

ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

Sunday, December 27th, 2020
Jagadeesha

ಉಡುಪಿ : ಸಾರ್ವಜನಿಕವಾಗಿ  ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದಂದು ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು […]

ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ

Tuesday, December 24th, 2019
tambaku

ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಡಿಕೇರಿ ಕೊಡಗು ಇವರ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದಲ್ಲಿ ಸೋಮವಾರ ವಿವಿಧ ತಂಬಾಕಿನ ಅಂಗಡಿಗಳ ಮೇಲೆ ಕೋಟ್ಪಾ ಕಾರ್ಯಾಚರಣೆ ನಡೆಸಿದರು. ಪಾನ್ ಶಾಪ್, ಹೋಟೆಲ್, ಕಿರಾಣಿ ಅಂಗಡಿಗಳ ಮೇಲೆ ತಂಡವು ಕೋಟ್ಪಾ 2003ರ ದಾಳಿ ನಡೆಸಲಾಯಿತು. ಹೋಟೆಲ್, ಬಾರ್, ಅಂಗಡಿ ಮತ್ತು ಪಾನ್ ಶಾಪ್ ಗಳಲ್ಲಿ ಸೆಕ್ಷನ್4 60*45) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ […]

ಅಭಿಷೇಕ್ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್ : ಹೋಟೆಲ್‍ನ ರೂಂನಲ್ಲಿದ್ದ ವ್ಯಕ್ತಿಯಿಂದ ಕೃತ್ಯ

Saturday, November 30th, 2019
Abishek

ಮೈಸೂರು : ಅಮೆರಿಕದಲ್ಲಿ ಮೈಸೂರಿನ ಯುವಕ ಅಭಿಷೇಕ್ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಹೋಟೆಲ್‍ನ ರೂಂನಲ್ಲಿದ್ದ ವ್ಯಕ್ತಿಯೇ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಅಮೆರಿಕದ ಸ್ಯಾನ್‍ಬರ್ನಾಡಿಯೊ ಪ್ರದೇಶದ ಹೋಟೆಲ್‍ನಲ್ಲಿ ಅಭಿಷೇಕ್ ಸುದೇಶ್ ಭಟ್ (25) ಕೆಲಸ ಮಾಡುತ್ತಿದ್ದರು. ಎಂದಿನಂತೆ ಹೋಟೆಲ್‍ನ ಕೆಲಸಗಾರರು ಗುರುವಾರ ರೂಂ ಸ್ವಚ್ಛಗೊಳಿಸುತ್ತಿದ್ದರು. ಆದರೆ ಒಂದು ರೂಂನಲ್ಲಿದ್ದ ವ್ಯಕ್ತಿಯೊಬ್ಬ ಮಾತ್ರ ಬಾಗಿಲು ತೆಗೆದಿರಲಿಲ್ಲ. ಈ ವಿಚಾರವನ್ನು ಕೆಲಸಗಾರರು ಅಭಿಷೇಕ್‍ಗೆ ತಿಳಿಸಿದ್ದರು. ಆಗ ಅಭಿಷೇಕ್ ವ್ಯಕ್ತಿ ಇದ್ದ ರೂಂ ಬಾಗಿಲನ್ನು ತಟ್ಟಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಏಕಾ […]

ಟೀ ಕುಡಿದ ಹಣ ಕೇಳಿದಕ್ಕೆ ಹೋಟೆಲನ್ನೇ ಪುಡಿ ಮಾಡಿದ ಗಿರಾಕಿ !

Thursday, October 31st, 2019
Hotel

ಮೈಸೂರು : ಟೀ ಕುಡಿದಿದ್ದಕ್ಕೆ ಹಣ ಕೇಳಿದ ಅಂಗಡಿಯವರ ಮೇಲೆರಗಿ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಲ್ಲದೆ ಬಿಸ್ಕೆಟ್ ಕಂಟೇನರ್, ಗಾಜಿನ ಬಾಟಲಿಗಳು, ಟೇಬಲ್ ಕಿತ್ತು ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಿನ್ನೆ ನಡೆದಿದ್ದು, ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದೀಗ ಪೊಲೀಸರ ಅತಿಥಿಯಾಗಿರುವ ವ್ಯಕ್ತಿಯನ್ನು ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ(35) ಎಂದು ಗುರುತಿಸಲಾಗಿದ್ದು, ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಹೈಡ್ರಾಮ ನಡೆಸಿದ ವ್ಯಕ್ತಿಯಾಗಿದ್ದು, ಬಳಿಕ ಸಾರ್ವಜನಿಕ ರಿಂದ ಧರ್ಮದೇಟು ತಿಂದಿದ್ದಾನೆ. ನಿನ್ನೆ ಬೆಳಿಗ್ಗೆ […]