ನಗರದ ವೆಲೆನ್ಸಿಯಾ ಬಳಿ ದುಷ್ಕರ್ಮಿಗಳಿಂದ ಭೀಕರ ಹತ್ಯೆ

12:54 PM, Monday, April 8th, 2013
Share
1 Star2 Stars3 Stars4 Stars5 Stars
(No Ratings Yet)
Loading...

Murdered at Valenciaಮಂಗಳೂರು : ಬಾನುವಾರ ರಾತ್ರಿ ನಗರದ ಕಂಪನಿಯೊಂದರ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವೆಲೆನ್ಸಿಯ ಬಳಿಯ ಮಂಗಳಾ ಬಾರ್ ಸಮೀಪ ನಡೆದಿದೆ.

ಶ್ರೀ ಆದಿನಾಥೇಶ್ವರ ರೋಡ್ ಲೈನ್ಸ್ (ಟ್ರಾನ್ಸ್‌ಪೋರ್ಟ್ ) ಸಂಸ್ಥೆಯ ಮ್ಯಾನೇಜರ್ ಪ್ರಶಾಂತ್ ಯಾನೆ ಪಚ್ಚು(30) ಹತ್ಯೆಯಾದವರು. ಪ್ರಶಾಂತ್ ಅವಿವಾಹಿತರಾಗಿದ್ದು, ಮರಕಡ ಕುಂಜತ್ತಬೈಲ್ ನ ನಿವಾಸಿಯಾಗಿರುವ ಸುಂದರ ಎಂಬವರ ಪುತ್ರರಾಗಿದ್ದಾರೆ.

ಬಾನುವಾರ ರಾತ್ರಿ ಸುಮಾರು 11.45 ರ ವೇಳೆ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಸುಮಾರು 7-8 ಮಂದಿಯ ತಂಡ ಪ್ರಶಾಂತ್ ರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿ ಹತ್ಯೆ ನಡೆಸಿದೆ ಎಂದು ತಿಳಿದುಬಂದಿದೆ. ಮೊದಲು ಕಾರಿನ ಒಳಗಡೆ ಹಲ್ಲೆ ಮಾಡಿದ ಬಳಿಕ ದುಷ್ಕರ್ಮಿಗಳು ಪ್ರಶಾಂತ್ ರನ್ನು ಕಾರಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ. ಕಾರಿನ ಒಳಗೆ ಕೂಡ ರಕ್ತದ ಕಲೆಗಳು ಪತ್ತೆಯಾಗಿದೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English