ಬಾಲಿವುಡ್ ಅದೃಷ್ಟ ಪರೀಕ್ಷೆ ಕಾಣೆಯಾದ ನಿಧಿ

5:02 PM, Friday, January 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Nidhi subbaiahಬೆಂಗಳೂರು : ಕನ್ನಡ ಚಿತ್ರರಂಗದ ಹೊಸ ಪ್ರತಿಭೆಯಾದ ನಿಧಿ ಸುಬ್ಬಯ್ಯ ಬಾಲಿವುಡ್ ಚಿತ್ರ ಜಗತ್ತಿಗೆ ಎಂಟ್ರಿ ಕೊಟ್ಟಾಗ ಇಡೀ ಚಿತ್ರೋದ್ಯಮವೇ ಸಂಭ್ರಮ ಪಟ್ಟಿತ್ತು. ಓ ಮೈ ಗಾಡ್, ಅಜಬ್ ಗಜಬ್ ಲವ್ ಮೊದಲಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ ಈ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಬಾಲಿವುಡ್‌ನಲ್ಲಿ ತೆರೆಕಂಡ ಎರಡೂ ಚಿತ್ರಗಳೂ ಬಾಕ್ಸ್ ಆಫೀಸಿನಲ್ಲಿ ಸೋತ್ತಿದ್ದರಿಂದ ಕಂಗಾಲಾಗಿದ್ದಾರೆ .

ಇವರಿಗೆ, ಓ ಮೈ ಗಾಡ್ ಚಿತ್ರಕ್ಕಿಂತ ಅಜಬ್ ಗಜಬ್ ಲವ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಈ ಚಿತ್ರದಲ್ಲಿ ಇವರು ಸಾಕಷ್ಟು ಬೋಲ್ಡ್ ಆಗಿ ನಟಿಸಿದ್ದರು. ಆಪ್ತರ ಮುಂದೆ ಗ್ಯಾರಂಟಿ ಗೆಲ್ಲುತ್ತೆ ಬಿಡಿ ಎಂದು ಹೇಳಿದ್ದರು. ಪ್ರಚಾರದ ಸಮಯದಲ್ಲಿ, ಇದು ನನಗೆ ಬ್ರೇಕ್ ನೀಡಬಲ್ಲ ಚಿತ್ರವೆಂದು ಮಾತಾಡಿದ್ದರು. ಬಟ್, ಅಂದುಕೊಂಡಿದ್ದು ಉಲ್ಟಾ ಆಗಿದೆ. ನೆಚ್ಚಿಕೊಂಡಿದ್ದ ಮೊದಲನೆಯ ಸಿನಿಮಾ ಕೈ ಕೊಟ್ಟಿದೆ.ನಿಧಿ ಇಲ್ಲಿಂದ ಮುಂಬೈ ಫ್ಲೈಟ್ ಹತ್ತುವಾಗ, ಒಂದೇ ಕಂಪೆನಿಯ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಅಜಬ್ ಗಜಬ್ ಲವ್ ಒಂದು. ಈ ಚಿತ್ರ ಬಿಡುಗಡೆಯಾಗಿ ನಾಲ್ಕು ತಿಂಗಳಾಗಿವೆ. ಮುಂದಿನ ಸಿನಿಮಾದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನಿಧಿ ಕೂಡ ಮತ್ತೊಂದು ಚಿತ್ರ ಒಪ್ಪಿಕೊಂಡಿಲ್ಲ. ಹಾಗಾಗಿ ಈಗ ನಿಧಿ ಖಾಲಿ ಖಾಲಿ.

ಕನ್ನಡದ ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಚಿತ್ರದ ನಟನೆಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು. ‘ಪಂಚರಂಗಿ’ಯ ಬಬ್ಲಿ ಪಾತ್ರ ಎಲ್ಲರನ್ನೂ ಮೆಚ್ಚಿಸಿತ್ತು. ‘ವೀರಬಾಹು’ ಚಿತ್ರದ ಅಯ್ಯಂಗಾರಿ ಬ್ರಾಹ್ಮಣರ ಹುಡುಗಿಯಾಗಿ ಇವರು ಮಿಂಚಿದ್ದರು. ಅಣ್ಣಾಬಾಂಡ್‌ಲ್ಲೂ ಕೂಡ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಆದ್ದರಿಂದ ನಿಧಿ ಒಬ್ಬ ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಸಂಶಯವಿಲ್ಲ ಆದರೆ, ಬಾಲಿವುಡ್‌ಲ್ಲಿ ಅದೃಷ್ಟ ಕೈ ಕೊಟ್ಟಿದೆ.

ಸಿನಿಮಾ ಸೋತಾಗ ಅಯ್ಯೋ ಆ ಸಿನಿಮಾದಲ್ಲಿ ನಟಿಸಬಾರದಿತ್ತು ಎಂದು ನಾನು ಯಾವತ್ತೂ ಪಶ್ಚಾತ್ತಾಪ ಪಟ್ಟಿಲ್ಲ. ಸಿನಿಮಾ ಸೋಲುವುದು, ಗೆಲ್ಲುವುದು ನನ್ನ ಕೈಲಿ ಇರೋಲ್ಲ. ಅದನ್ನು ಪ್ರೇಕ್ಷಕರು ಡಿಸೈಡ್ ಮಾಡುತ್ತಾರೆ’ ಎಂದು ಆಗಾಗ್ಗೆ ಹೇಳುತ್ತಿದ್ದ ಇವರು, ಇದನ್ನೇ ಮತ್ತೆ ಹೇಳಬಹುದು. ಆದರೆ, ನಿಧಿ ಗೆಲ್ಲಬೇಕು. ಕನ್ನಡದ ಮತ್ತೊಂದು ಪ್ರತಿಭೆ, ಬಾಲಿವುಡ್‌ನಲ್ಲಿ ನೆಲೆಯೂರಬೇಕು. ಇದಕ್ಕಾಗಿ ಇವರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English