ಎಸ್.ಡಿ.ಎಮ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯ ಐಯುರಿಸ್ 2013 ಕ್ಕೆ ಚಾಲನೆ

5:31 PM, Saturday, February 9th, 2013
Share
1 Star2 Stars3 Stars4 Stars5 Stars
(No Ratings Yet)
Loading...

National Law Festಮಂಗಳೂರು : ನಗರದ ಎಸ್.ಡಿ.ಎಮ್ ಕಾಲೇಜಿನಲ್ಲಿ ಫೆಬ್ರವರಿ 8 ರಂದು ನಡೆದ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಕಾನೂನು ಸಂಶೋಧನಾ ಕೇಂದ್ರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯ ಐಯುರಿಸ್ 2013 ನ್ನು ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾದ ಅಶೋಕ್ ಜಿ. ನಿಜಗನ್ನವರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಾನೂನು ವಿದ್ಯಾರ್ಥಿಗಳು ನೈತಿಕ ಜವಾಬ್ದಾರಿಯನ್ನು ಹೊಂದಿದ್ದು, ಕೇವಲ ಹಣ ಮಾಡುವ ಉದ್ಧೇಶದಿಂದ ತಮ್ಮ ವೃತ್ತಿ ಬದುಕನ್ನು ಆರಿಸಿಕೊಳ್ಳಬಾರದು, ನ್ಯಾಯವಾದಿಗಳು ಸಂವಿಧಾನದ ಮೂಲ ತತ್ವವನ್ನು ಎತ್ತಿ ಹಿಡಿಯುವಂತಹ ಕಾರ್ಯವನ್ನು ಮಾಡಿದಾಗ ನ್ಯಾಯಾಂಗ ವ್ಯವಸ್ಥೆಯು ಬಲಗೊಂಡು ದೇಶ ಸದೃಢವಾಗುವುದು. ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಯೆಡಪಡಿತ್ತಾಯ ದೇಶದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿ ನ್ಯಾಯಾಂಗ ವ್ಯವಸ್ಥೆಯು ಇದ್ದು. ಇಲ್ಲಿ ಯಾವುದೇ ರೀತಿಯ ಸ್ವಜನ ಪಕ್ಷಪಾತ, ಪ್ರಭಾವ ಮುಂತಾದವುಗಳು ನಡೆಯಬಾರದು. ಒಂದು ವೇಳೆ ನಡೆದರೆ ಪೂರ್ತಿ ದೇಶವೇ ಕೆಟ್ಟು ಹೋಗಿ ಅಪಾಯದ ಸ್ಥಿತಿಗೆ ತಲುಪಬಹುದು ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿಯ ರಿಜಿಸ್ಟ್ರಾರ್ ಡಾ. ಪಿ. ಎಸ್. ಯಡಪಡಿತ್ತಾಯ ವಹಿಸಿದ್ದರು. ಕಾಯ೯ಕ್ರಮದಲ್ಲಿ ಮೂಟ್ ಕೋಟ್೯ ಸೊಸೈಟಿಯ ಉಪಾಧ್ಯಕ್ಷೆ ಗ್ರೀಷ್ಮ ರೈ, ಚಿರಾಗ್, ಆದಿತ್ಯ, ಆಯೋಜಕ ಅನಿಶ್ ಆಚಾಯ೯ ಮತ್ತಿತರರು ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English