
ಮಂಗಳೂರು : ನೆಕ್ಕಿಲ ಗುಡ್ಡೆ ಮಾಲೇಮಾರ್ ಪರಿಸರದಲ್ಲಿ ನೆಲೆಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಭಕ್ತರ ಸಡಗರ-ಸಂಭ್ರಮಗಳ ನಡುವೆ ಅದ್ದೂರಿಯಾಗಿ ನಡೆಯಿತು. ಈ ಧಾರ್ಮಿಕ ಉತ್ಸವದ ಪ್ರಮುಖ ಆಕರ್ಷಣೆಯಾಗಿ ದೇರೆಬೈಲ್ ರಾಮ ಮಂದಿರದಿಂದ ಭವ್ಯವಾದ ಕುಂಭ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು.
ಈ ಮೆರವಣಿಗೆಯುದ್ದಕ್ಕೂ ಸಾಗಿದ ಕುಣಿತ ಭಜನೆ ಮತ್ತು ಡೊಳ್ಳು ಕುಣಿತದ ತಂಡಗಳು ನೋಡುಗರ ಗಮನ ಸೆಳೆದವು. ಸಹಸ್ರಾರು ಭಕ್ತರು ಶ್ರದ್ಧಾಭಕ್ತಿಯಿಂದ ತಲೆಯ ಮೇಲೆ ಕುಂಭದ ಕಳಸವನ್ನಿಟ್ಟು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಂಗಳೂರಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ನೂರಾರು ಕುಟುಂಬಗಳು ಉದ್ಯೋಗ ನಿಮಿತ್ತ ಹಲವು ವರ್ಷಗಳ ಹಿಂದೆ ಮಂಗಳೂರಿಗೆ ಬಂದು ನೆಲೆಸಿದ್ದು, ಭಕ್ತಿಯ ಸಂಕೇತವಾಗಿ ಮಾಲೇಮಾರ್ನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಕನ್ನಡ ಭಾಗದ ಅಸಂಖ್ಯಾತ ಜನರು ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಕುಲದೇವಿಯ ಕೃಪೆಗೆ ಪಾತ್ರರಾದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









