ಮಲಯಾಳಿ ಕಡ್ಡಾಯ ನೀತಿಯಿಂದ ಕನ್ನಡಿಗರನ್ನು ಹೊರತುಪಡಿಸುವುದಾಗಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಭರವಸೆ

11:32 AM, Saturday, March 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

Umman Chandiಕಾಸರಗೋಡು : ಕೇರಳದಲ್ಲಿ ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎಂಬ ಆದೇಶದಿಂದ ಕನ್ನಡಿಗರನ್ನು  ಹೊರತುಪಡಿಸಬೇಕೆಂದು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾದ ಮಂಜೇಶ್ವರ ಶಾಸಕರು ತಿಳಿಸಿದ್ದಾರೆ.

ಕೇರಳದಲ್ಲಿ ಇನ್ನು ಮುಂದೆ  ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎನ್ನುವ ಸರ್ಕಾರದ ಶಿಫಾರಸ್ಸನು ಕೇರಳದ ಲೋಕಸೇವಾ ಆಯೋಗ ಅಂಗೀಕರಿಸಿದ್ದು ಈ ಆದೇಶ ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರನ್ನು ಸರಕಾರಿ ನೌಕರಿಯಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆ ಇದೆ.

ಆದ್ದರಿಂದ ಈ ನಿಯಮದಿಂದ ಕನ್ನಡಿಗರನ್ನು ಹೊರತುಪಡಿಸಬೇಕೆಂದು ಕೇಳಿಕೊಳ್ಳಲಾಗಿದ್ದು  ಈ ನಿಯಮದಿಂದ ಕಾಸರಗೋಡಿನ ಕನ್ನಡಿಗರನ್ನು ಹೊರತುಪಡಿಸುವುದಾಗಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಭರವಸೆ ನೀಡಿರುವುದಾಗಿ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English