ಮಂಗಳೂರು: ಕಾಲೇಜೊಂದರ ವಿದ್ಯಾರ್ಥಿಗಳು ಬುಧವಾರ ರಾತ್ರಿ ಬೀಳ್ಕೊಡುಗೆ ಸಮಾರಂಭಲ್ಲಿ ಭಾಗವಹಿಸಿ ಆಹಾರ ಸೇವಿಸಿದ ಬಳಿಕ ಆಸ್ವಸ್ಥರಾದ ಘಟನೆ ಮಂಗಳೂರಿನ ಅಶೋಕನಗರದ ಬಳಿ ನಡೆದಿದೆ. ಅಶೋಕನಗರದ ನರ್ಸಿಂಗ್ ಕಾಲೇಜೊಂದರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ಸುಮಾರು 300 ಮಂದಿ ಆಹಾರ ಸೇವಿಸಿದ್ದು, ಅವರಲ್ಲಿ 160 ಮಂದಿಗೆ ಅಸ್ವಸ್ಥತೆ ಕಂಡು ಬಂತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ 120 ಮಂದಿ ಪ್ರಥಮ ಜಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ.
ಉಳಿದ 40 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫುಡ್ ಪಾಯ್ಸನ್ ಆಗಿರ ಬೇಕೆಂದು ಶಂಕಿಸಲಾಗಿದೆ.
Click this button or press Ctrl+G to toggle between Kannada and English