ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದ ಎಲ್ಲಾ ೭ ಆರೋಪಿಗಳು ಪೋಲೀಸ್ ಕಸ್ಟಡಿಗೆ

5:44 PM, Thursday, January 31st, 2013
Share
1 Star2 Stars3 Stars4 Stars5 Stars
(No Ratings Yet)
Loading...

Adiga murder accused police custodyಮಂಗಳೂರು : ವಂಡಾರು ಕೊಕ್ಕನಬೈಲು ನಿವಾಸಿ, ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೭ ಮಂದಿಯಲ್ಲಿ ಪ್ರಕರಣದ ರುವಾರಿ ರಮೇಶ್ ಬಾಯರಿ ಹಾಗೂ ಸುಬ್ರಮಣ್ಯ ಉಡುಪ, ರವಿಚಂದ್ರ ಮತ್ತು ಮೋಹನನಿಗೆ ಹೆಚ್ಚಿನ ತನಿಖೆ ನಿಮಿತ್ತ 2 ದಿನ ಪೋಲೀಸ್ ಕಸ್ಟಡಿ ಹಾಗೂ ಉಳಿದ ನಾಲ್ವರು ಆರೋಪಿಗಳಾದ ಕೆ.ಎಸ್. ರಾಘವೇಂದ್ರ, ಉಮೇಶ, ನವೀನ ಇವರುಗಳಿಗೆ ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಒಂದು ದಿನದ  ವಿಧಿಸಿದೆ.

ತನಿಖೆಗೆ ಸಂಬಂಧಿಸಿದಂತೆ ನಾಲ್ಕುದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕುಂದಾಪುರ ನ್ಯಾಯಾಲಯಕ್ಕೆ ಪೊಲೀಸರು ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ಆದೇಶದಂತೆ ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಾದ ಉಮೇಶ್‌, ನವೀನ್‌ ಹಾಗೂ ರಾಘವೇಂದ್ರನಿಗೆ ಮಾರ್ಚ್ 31ರ ತನಕ ಹಾಗೂ ಪ್ರಮುಖ ಆರೋಪಿ ರಮೇಶ ಬಾಯಿರಿ, ಇತರ ಆರೋಪಿಗಳಾದ ಸುಬ್ರಹ್ಮಣ್ಯ ಉಡುಪ, ಮೋಹನ್‌ ಹಾಗೂ ರವಿಚಂದ್ರರಿಗೆ ಫೆಬ್ರವರಿ 1ರ ತನಕ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ  ವಂಡಾರಿನ ರಮೇಶ ಬಾಯಿರಿ ಪ್ರಮುಖ ಆರೋಪಿಯಾದರೆ, ಸುಬ್ರಹ್ಮಣ್ಯ ಉಡುಪ, ಉಮೇಶ, ರವಿಚಂದ್ರ, ನವೀನ್‌, ಮೋಹನ್‌, ರಾಘವೇಂದ್ರ ಇತರ ಆರೋಪಿಗಳಾಗಿದ್ದಾರೆ. ಜನವರಿ ೭ ರಂದು ರಮೇಶ ಬಾಯಿರಿ ಹಾಗೂ ಸುಬ್ರಹ್ಮಣ್ಯ ಉಡುಪ ಅವರ ಸೂಚನೆಯಂತೆ ಇವರು ಅಡಿಗರನ್ನು ಅಪಹರಿಸಿ, ಹತ್ಯೆ ಮಾಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English