ಗಾಂಜಾ ಮಾರಾಟ ಆರೋಪಿಗಳ ಸೆರೆ

4:30 PM, Wednesday, February 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Ganja seized at Sulliaಮಂಗಳೂರು : ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಬೆಳಗ್ಗಿನ ಜಾವ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಅವರಿಂದ ಕಾರು ಸಹಿತ ೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಕುರುಂಜಿಭಾಗ್ ದೇವರಕಳಿಯ ನಿವಾಸಿ ತೀರ್ಥಪ್ರಸಾದ್(೨೧), ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಇರ್ಫಾನ್ (೨೦) ಮತ್ತು ಜೂನಿಯರ್ ಕಾಲೇಜು ನಿವಾಸಿ ವಿನೋದ್(೨೩) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡಿನ ಚೆರ್ಕ ಎಂಬವನು ತಲೆಮರೆಸಿಕೊಂಡಿದ್ದಾನೆ.

ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಮುಂಜಾನೆ ೫ ಗಂಟೆ ಸುಮಾರಿಗೆ  ತೀರ್ಥಪ್ರಸಾದ್ ಎಂಬವರಿಗೆ ಸೇರಿದ ವ್ಯಾಗನರ್ ಕಾರೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಅಡಿಷನಲ್ ಎಸ್ಪಿ ಸದಾನಂದ ಪರ್ಣೆಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳಿಂದ ೩೦೦ ಗ್ರಾಂ ಗಾಂಜಾ, ೩ ನೋಕಿಯಾ ಮೊಬೈಲ್, ೫೫೦ ರೂಪಾಯಿ ನಗದು  ಮತ್ತು ಕಾರು ಸಹಿತ ಸುಮಾರು ೫ ಲಕ್ಷ ರೂಪಾಯಿ ಮೌಲ್ಯದ ಸೊತ್ತು ಮತ್ತು ಗಾಂಜಾ ವಶಪಡಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English