ಬಂಟ್ವಾಳದಲ್ಲಿ ಕಪಾಟು ವಿತರಣೆ, ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲು

12:50 PM, Thursday, March 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

Bantwal, Godraje delivaryಬಂಟ್ವಾಳ : ಬುಧವಾರ ಬಂಟ್ವಾಳದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಾದ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಘಟನೆ ಬೆಳಕಿಗೆ ಬಂದಿದೆ.

ಬುಧವಾರ ಬೆಳಿಗ್ಗೆ ಚೆಂಡ್ತಿಮಾರು ದಲಿತಕಾಲೋನಿಗೆ ಪಿಕಪ್ ವಾಹನದಲ್ಲಿ ಕಪಾಟುಗಳನ್ನು ತರಲಾಗಿದ್ದು, ಮೂರು ಮನೆಗಳಿಗೆ ವಿತರಣೆ ಮಾಡಲಾಗಿದೆ. ಈ ಕುರಿತು ಮನೆಮಾಲಕರೊಬ್ಬರು ಪ್ರಶ್ನಿಸಿದರೂ  ಕೇಳದೆ ಕಪಾಟು ಇಳಿಸಿ ತೆರಳಿದ್ದಾರೆ. ಇದಕ್ಕೆ ಬಿಜೆಪಿಯ ಸೂಚನೆಯಂತೆ ಮುಖ್ಯಾಧಿಕಾರಿಗಳು ಕಪಾಟು ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ.

ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿಗಳು, ಪೊಲೀಸರ ತಂಡ, ವಿತರಿಸಿದ ಮೂರು ಕಪಾಟುಗಳನ್ನು ವಶಪಡಿಸಿಕೊಂಡು ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English