ಉತ್ತರ ಪ್ರದೇಶದ ಕಬಡ್ಡಿ ಆಟಗಾರನೊಬ್ಬ ನಾಯಿ ಕಡಿತದಿಂದ ‘ರೇಬೀಸ್’ ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಮೂರು ತಿಂಗಳ ಹಿಂದೆ, ನಾಯಿಯೊಂದು ಆಟಗಾರನಿಗೆ ಕಚ್ಚಿತ್ತು. ನಾಯಿ ಕಡಿತವನ್ನು ಸಣ್ಣ ಗಾಯವೆಂದು ಪರಿಗಣಿಸಿ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಬ್ರಿಜೇಶ್ ಅವರ ವೀಡಿಯೊ ಕೂಡ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ರೇಬೀಸ್ ರೋಗದಿಂದ ನರಳುತ್ತಿರುವುದು ಕಂಡುಬಂದಿದೆ.
ಕಬಡ್ಡಿ ಆಟಗಾರನ ತರಬೇತುದಾರ ಪ್ರವೀಣ್ ಕುಮಾರ್, ನಾಯಿ ಕಚ್ಚಿದ್ದನ್ನು ಬ್ರಿಜೇಶ್ ಸಾಮಾನ್ಯ ಗಾಯವೆಂದು ಪರಿಗಣಿಸಿದ್ದರು. ಕಚ್ಚಿದ ಗಾಯವು ಚಿಕ್ಕದಾಗಿತ್ತು. ಹೀಗಾಗಿ ಅದನ್ನು ಗಂಭೀರವಾಗಿ ಭಾವಿಸಲಿಲ್ಲ. ಅದಕ್ಕಾಗಿಯೇ ಅವರು ಲಸಿಕೆ ಪಡೆಯಲಿಲ್ಲ. ಆದರೆ ಜೂನ್ 26ರಂದು ಕಬಡ್ಡಿ ಅಭ್ಯಾಸದ ಸಮಯದಲ್ಲಿ ಬ್ರಿಜೇಶ್ ಮರಗಟ್ಟುವಿಕೆ ಬಗ್ಗೆ ದೂರು ನೀಡಿದ್ದರು. ಇದಾದ ನಂತರ, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು.
ಬ್ರಿಜೇಶ್ ಇದ್ದಕ್ಕಿದ್ದಂತೆ ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ಕ್ರಮೇಣ ಅವರಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು ಎಂದು ಬ್ರಿಜೇಶ್ ಅವರ ಸಹೋದರ ಸಂದೀಪ್ ಕುಮಾರ್ ತಿಳಿಸಿದ್ದಾರೆ. ದೆಹಲಿ ಸೇರಿದಂತೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಿಲ್ಲ ಎಂದು ಆಟಗಾರನ ಸಹೋದರ ಹೇಳಿದ್ದಾರೆ.
