ಮಂಗಳೂರು : ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿಯಮಿತ (DKMUL) 2024–25ರಲ್ಲಿ ವಾರ್ಷಿಕ 1,174 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಸುಮಾರು 12.8 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಈ ಹಣಕಾಸು ವರ್ಷದಲ್ಲಿ ಒಕ್ಕೂಟವು ಪ್ರತಿದಿನ ಸರಾಸರಿ 4.02 ಲಕ್ಷ ಲೀಟರ್ ಹಾಲು ಮತ್ತು 81,000 ಕೆಜಿ ಮೊಸರನ್ನು ಮಾರಾಟ ಮಾಡಿದೆ. ಈ ಅವಧಿಯಲ್ಲಿ ಒಕ್ಕೂಟವು ವಿವಿಧ ರೈತ ಸ್ನೇಹಿ ಉಪಕ್ರಮಗಳು ಮತ್ತು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. 751 ಸಂಘಗಳ ಅಡಿಯಲ್ಲಿ 55,000 ಡೈರಿ ರೈತರ ಅನುಕೂಲಕ್ಕಾಗಿ ಸ್ಥಾಪಿಸಲಾದ ರೈತ ಕಲ್ಯಾಣ ಟ್ರಸ್ಟ್, ಕಳೆದ ವರ್ಷ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಜಾನುವಾರುಸಾವು ಮತ್ತು ರೈತರ ಮರಣವನ್ನು ಭರಿಸಲು 2.05 ಕೋಟಿ ರೂ.ಗಳನ್ನು ವಿತರಿಸಿದೆ. ಒಕ್ಕೂಟವು 2024–25ರಲ್ಲಿ 30,629 ಪ್ರಾಣಿಗಳನ್ನು ಒಳಗೊಂಡ ಜಾನುವಾರು ವಿಮೆಯನ್ನು ಪರಿಚಯಿಸಿತು ಮತ್ತು 1,177 ಕ್ಲೈಮ್ಗಳನ್ನು ಈಗಾಗಲೇ ಪ್ರಕ್ರಿಯೆಗೊಳಿಸಲಾಗಿದೆ. ಹಾಸನ, ಮೈಸೂರು ಮತ್ತು ಧಾರವಾಡದಿಂದ ಸುಮಾರು 1,000 ಟನ್ ಹಸಿರು ಮೇವನ್ನು ಖರೀದಿಸಿ, ಹಾಲಿನ ಇಳುವರಿಯನ್ನು ಬೆಂಬಲಿಸಲು ಹಾಲು ಸಂಘಗಳ ಮೂಲಕ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಡಿ.ಕೆ.ಎಂ.ಯು.ಎಲ್ನ ಭವಿಷ್ಯದ ಯೋಜನೆಗಳ ಕುರಿತು ಹೆಗ್ಡೆ ಮಾತನಾಡಿ, ನಂದಿನಿ ಬ್ರಾಂಡ್ನಡಿಯಲ್ಲಿ ಪೇರಲ ಮೆಣಸಿನಕಾಯಿ ಲಸ್ಸಿ, ಸೀಡ್ಸ್ ಮ್ಯಾಜಿಕ್ ಲಡೂ, ಪ್ರೋಟೀನ್ ಪನೀರ್, ನಂದಿನಿ ಪ್ರೋಟೀನ್ ಪಂಚ್ ಮತ್ತು ಹಾಲೊಡಕು ಆಧಾರಿತ ಪಾನೀಯಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಒಕ್ಕೂಟ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದರು. ಪನೀರ್ ಪ್ಯಾಕೇಜಿಂಗ್ ಅನ್ನು ಸುಧಾರಿಸಲು ನಿರ್ವಾತ ಥರ್ಮೋಫಾರ್ಮಿಂಗ್ ಯಂತ್ರವನ್ನು ಖರೀದಿಸಲಾಗುವುದು. ಮಂಗಳೂರು ಮತ್ತು ಉಡುಪಿ ಡೈರಿಗಳಿಗೆ ಸ್ಥಿರವಾದ ನೀರು ಸರಬರಾಜು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
2024-25 ನೇ ಸಾಲಿನಲ್ಲಿ ಹಸಿರು ಹುಲ್ಲು ಅಭಿವೃದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿಗೆ ಅನುದಾನ, ಮಿನಿಡೇರಿ, ಯೋಜನೆ, ಅನಿಲ ಸ್ಥಾವರ ಅಭಿವೃದ್ಧಿ, ಸ್ಲರಿ ಪಂಪು ಖರೀದಿಗೆ ಅನುದಾನ, ಹಾಲು ಕರೆಯುವ ‘ಯಂತ್ರ ಖರೀದಿಗೆ ಅನುದಾನ, ಹಟ್ಟಿ ತೊಳೆಯುವ ಯಂತ್ರ ಖರೀದಿಗೆ ಅನುದಾನ, ವಿಚಾರ ಗೋಷ್ಠಿ ನಡೆಸಲು ಅನುದಾನ, ಹೊರ ರಾಜ್ಯದ ರಾಸು ಖರೀದಿಗೆ ಅನುದಾನ, ರಬ್ಬರ ಮ್ಯಾಟ್ ಖರೀದಿಗೆ ಅನುದಾನ, ವಾಣಿಜ್ಯ ಡೇರಿ ಘಟಕಕ್ಕೆ ಅನುದಾನ ಒಟ್ಟು ವಿವಿಧ ಯೋಜನೆಗಳಿಗೆ ರೂ.2.60 ಕೋಟಿಗಳನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ. ದಿನಾಂಕ 01.04.2025 ರಿಂದ 3.5% ಫ್ಯಾಟ್ ಮತ್ತು 8.5% ಎಸ್.ಎನ್.ಎಫ್.ಗೆ ಒಕ್ಕೂಟದಿಂದ ಸಂಘಗಳಿಗೆ ರೂ.40.30 ಹಾಗೂ ಸಂಘಗಳಿಂದ ಉತ್ಪಾದಕರಿಗೆ ರೂ.39.00 ನೀಡಲಾಗುತ್ತಿದೆ. ಪ್ರಸ್ತುತ ಒಕ್ಕೂಟದಲ್ಲಿ 4.4% ಫ್ಯಾಟ್ ಮತ್ತು 8.5% ಎಸ್.ಎನ್.ಎಫ್. ನ ಹಾಲು ರೈತರಿಂದ ಖರೀದಿಯಾಗುತ್ತಿದ್ದು, ಇದಕ್ಕೆ ಒಕ್ಕೂಟವು ಸಂಘಗಳಿಗೆ ರೂ. 42.06 ಹಾಗೂ ಉತ್ಪಾದಕರಿಗೆ ರೂ.40.76 ಗಳನ್ನು ಪಾವತಿಸುತ್ತಿದೆ ಎಂದರು.
ದಿನಾಂಕ 16.09.2025 ರಂದು ಉಭಯ ಜಿಲ್ಲೆಯ ಎಲ್ಲಾ 751 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ರಾಸುಗಳ ಒಳ ಮತ್ತು ಹೊರ ಪರೋಪ ಜೀವಿಗಳ ನಿರ್ಮೂಲನೆಗೆ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಒಕ್ಕೂಟದಿಂದ ರೂ.8.0 ಲಕ್ಷ ಅನುದಾನವನ್ನು ನೀಡಲಾಗುತ್ತಿದೆ. ಉತ್ಕೃಷ್ಟ ದಾನಿ ಹಸುವಿನಿಂದ ಸಂಗ್ರಹಿಸಿದ ಅಂಡಾಣು ಮತ್ತು ಉತ್ಕೃಷ್ಟ ತಳಿಯ ಲಿಂಗ ವರ್ಗೀಕೃತ ವೀರಾಣುಗಳನ್ನು ಪ್ರಯೋಗ ಶಾಲೆಯಲ್ಲಿ ಫಲೀಕರಿಸಿ, ಇಂತಹ ಭ್ರೂಣಗಳನ್ನು ಸದಸ್ಯ ರೈತರ ಆಯ್ದ ರಾಸುಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.
ಬಳಿಕ 12 ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ರವಿರಾಜ್ ಹೆಗ್ಡೆಯವರು ನೀಡಿದ್ದಾರೆ. ಒಕ್ಕೂಟಕ್ಕೆ ಲಾಭದಾಯಕವಾಗುವ ನೂತನ ಮೌಲ್ಯವರ್ಧಿತ ಉತ್ಪನ್ನಗಳಾದ Guava Chilly Lassi, Nandini Seeds Magic Ladoo, Protien Panner, Nandini Protien Punch ಮತ್ತು whey Drinks ಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಮಂಗಳೂರು ಮತ್ತು ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ಸಮೀಪದ ನೀರಿನ ಒರತೆಯಿರುವ ಸ್ಥಳವನ್ನು ಖರೀದಿಸಲು ಯೋಜಿಸಲಾಗಿದ್ದು ಪನ್ನೀರ್ ಉತ್ಪನ್ನವನ್ನು ಆಕರ್ಷಕವಾದ ನೂತನ Vaccumaized Thermoforming ಯಂತ್ರವನ್ನು ಖರೀದಿಸಿ ಪನ್ನೀರ್ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದರು.
ಉಡುಪಿ ಡೇರಿ ಆವರಣದಲ್ಲಿ ನೂತನ ಆಡಳಿತ ಕಛೇರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಮುಂದುವರೆದು ಪ್ರಸ್ತುತ ಕಛೇರಿ ಇರುವ ಪ್ರದೇಶದಲ್ಲಿ ನೂತನ ಸಿಹಿ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಲು ಯೋಜಿಸಲಾಗಿದೆ. ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ವಾರಾಹಿ ಯೋಜನೆಯಿಂದ ಪೈಪ್ಲೈನ್ ಆಳವಡಿಸಲು ಕ್ರಮವಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉದಯ ಕೋಟ್ಯಾನ್,ದೇವಿ ಪ್ರಸಾದ್ ಶೆಟ್ಟಿ,ಪ್ರಭಾಕರ್ ,ಚಂದ್ರಶೇಖರ್ ಹಾಗೂ ಮಮತಾ ಶೆಟ್ಟಿಯವರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









