ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆ, ಆರೋಪಿಯ ಬಂಧನ

3:44 PM, Monday, February 11th, 2013
Share
1 Star2 Stars3 Stars4 Stars5 Stars
(No Ratings Yet)
Loading...

Girish Putran murder caseಮಂಗಳೂರು : ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆಗೆ ಸಂಬಂಧಪಟ್ಟಂತೆ ಕೋಡಿಕಲ್ ನ ನತಾಶ(28) ಎಂಬ ಯುವತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದು, ಫೆಬ್ರವರಿ 23ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಯುವತಿಗೆ ಕಿರುಕುಳ ಹಾಗೂ ಅತಿಯಾದ ಚಿನ್ನಾಭರಣ ಧರಿಸುತ್ತಿದ್ದುದು ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಯುವತಿ ನತಾಶ ಗೆ  ಮದುವೆ ನಿಶ್ಚಿತಾರ್ಥ ನಡೆದಿದ್ದರೂ, ಗಿರೀಶ್ ಪುತ್ರನ್ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಯುವತಿ ಗಿರೀಶ್ ಪುತ್ರನ್ ಗೆ ಪಾಠ ಕಲಿಸಲು ತನ್ನ ಭಾವಿ ಪತಿ ಮತ್ತು ಇತರ ಮೂವರ ಜತೆ ಸೇರಿ ಈ ಕೃತ್ಯ ನಡೆಸಿದ್ದಾಳೆ. ಪ್ರಕರಣದ ಪ್ರಮುಖ ಆರೋಪಿಗಳಾದ ರಿತೇಶ್ ಹಾಗೂ ಇತರ ಮೂರು ಮಂದಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English