ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಸಂದರ್ಭ ಭಕ್ತರಿಂದ ಮಡೆಸ್ನಾನ ಹರಕೆ ಸೇವೆ ನಡೆಯಿತು

5:08 PM, Friday, January 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

Madesnaanaಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಚಂಪಾಷಷ್ಠಿಯ ಒಂದು ತಿಂಗಳ ಅನಂತರ ಕ್ಷೇತ್ರದಲ್ಲಿ ಆಚರಿಸಲಾಗುವ ಕಿರುಷಷ್ಠಿಯ ಪರ್ವದಿನವಾದ ಗುರುವಾರ ಭಕ್ತಾದಿಗಳು ಮಡೆಮಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.

ಈ ಹಿಂದೆ ಕ್ಷೇತ್ರದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ನಡೆಸುವಂತೆ ಉಚ್ಚ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌ನ ಮೂಲಕ ತಾತ್ಕಾಲಿಕ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ವಾರ್ಷಿಕ ಜಾತ್ರೆಯ ವೇಳೆ ಮಡೆಸ್ನಾನ ನಡೆದಿತ್ತು. ತಡೆಯಾಜ್ಞೆ ಇನ್ನು ಜಾರಿಯಲ್ಲಿರುವುದರಿಂದ ಗುರುವಾರ ಕೂಡ ಮಡೆಸ್ನಾನದ ಹರಕೆ ಸೇವೆ ಯಾವುದೇ ಅಡ್ಡಿಯಿಲ್ಲದೆ ನೆರವೇರಿತು. ಹರಕೆಯಲ್ಲಿ ನೂರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರು ಹಾಗೂ ದೇವಳದ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English