ವಿವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ “ಯುನಿಫೆಸ್ಟ್ 2023- ಸ್ಪೆಲ್ಲೆನ್” ಸ್ಪರ್ಧೋತ್ಸವ

Tuesday, June 6th, 2023
ವಿವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ "ಯುನಿಫೆಸ್ಟ್ 2023- ಸ್ಪೆಲ್ಲೆನ್” ಸ್ಪರ್ಧೋತ್ಸವ

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗವು, ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಅಂತರ್ ಕಾಲೇಜು ಮಟ್ಟದ “ಯುನಿಫೆಸ್ಟ್ 2023- ಸ್ಪೆಲ್ಲೆನ್” ಸ್ಪರ್ಧೋತ್ಸವವನ್ನು ಮಂಗಳವಾರ ಆಯೋಜಿಸಿತ್ತು. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಪರಮೇಶ್ವರ ಅವರು ಮಾತನಾಡಿ, ಶೈಕ್ಷಣಿಕ ಸ್ಪರ್ಧಾ ಕೂಟಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯ ವೃದ್ಧಿಸುತ್ತವೆ. ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ದಾರಿಯಾಗುತ್ತವೆ, ಆದರೆ ಅನುಭವ, ವೃತ್ತಿ ಹಾಗೂ […]

ಉನ್ನತ ಶಿಕ್ಷಣ ದಿಂದ ಬದುಕಿನ ಬಾಗಿಲುಗಳು ತೆರೆದುಕೊಳ್ಳುತ್ತವೆ: ಪ್ರೊ. ರೊನಾಲ್ಡ್ ಪಿಂಟೊ

Wednesday, May 17th, 2023
ಉನ್ನತ ಶಿಕ್ಷಣ ದಿಂದ ಬದುಕಿನ ಬಾಗಿಲುಗಳು ತೆರೆದುಕೊಳ್ಳುತ್ತವೆ: ಪ್ರೊ. ರೊನಾಲ್ಡ್ ಪಿಂಟೊ

ಮಂಗಳೂರು: ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಇಲ್ಲದೇ ಇದ್ದರೆ ಅವಕಾಶಗಳ ಕೊರತೆ ಉಂಟಾಗಬಹುದು. ವಿಜ್ಞಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು, ಅದರ ಲಾಭ ಪಡೆಯಲು ಉನ್ನತ ಶಿಕ್ಷಣ ಅನಿವಾರ್ಯ, ಎಂದು ಇನ್ಸ್ಟಿಟ್ಯೂಟ್ ಫಾರ್ ಇಂಡಿವ್ಯೂಶುವಲ್ ಡೆವೆಲಪ್ಮೆಂಟ್ ನ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೂ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ “ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು” ಎಂಬ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. […]

ಶ್ರಮವಹಿಸಿ ದುಡಿದರೆ ದೇಶದ ಆರ್ಥಿಕತೆ ಬೆಳಗುತ್ತದೆ : ಸುಹಾನಾ ಸಯ್ಯದ್ ಎಂ

Friday, December 2nd, 2022
unity week

ಮಂಗಳೂರು :  ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುವುದು ಮತ್ತು ವಿವಿಧ ಆರ್ಥಿಕ, ಸಾಮಾಜಿಕ ಸಮಸ್ಯೆ ನಿವಾರಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಈ ಕಾರ್ಯದಲ್ಲಿ ಸರಕಾರದ ಸಂಪೂರ್ಣ ಬೆಂಬಲ ಬೇಕು. ನಾವು ನಮ್ಮ ಕಾರ್ಯದಲ್ಲಿ ಶ್ರಮವಹಿಸಿದಾಗ ದೇಶದ ಆರ್ಥಿಕತೆ ಚೇತರಿಸುತ್ತದೆ. ಸರಕಾರ ಅಲ್ಪಸಂಖ್ಯಾತರಿಗೆ ನೀಡಿರುವ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ಮಂಗಳೂರಿನ ಬಾರಕ ಇಂಟರ್ನ್ಯಾಷನಲ್ ಕಾಲೇಜಿನ ಉಪನ್ಯಾಸಕಿ ಸುಹನ ಸಯ್ಯದ್ ಎಂ. ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ, ರಾಷ್ಟ್ರೀಯ ಐಕ್ಯತಾ ಸಪ್ತಾಹ – 2022 ಅಂಗವಾಗಿ […]

ಕ್ರೀಡೆ ಬಹುಮಾನ ಕ್ಕೆ ಮಾತ್ರವಲ್ಲ ಬದುಕಿಗೂ ಬೇಕು: ರವಿ ವೈ, ನಾಯ್ಕ

Tuesday, September 13th, 2022
annual-sports

ಮಂಗಳೂರು: ಕ್ರೀಡೆ ಬಹುಮಾನ ಕ್ಕೆ ಮಾತ್ರವಲ್ಲ ಬದುಕಿಗೂ ಬೇಕು. ದಿನಕ್ಕೆ ಅರ್ಧ ಗಂಟೆಯಷ್ಟು ಹೊತ್ತನ್ನು ಕ್ರೀಡೆಗೆ, ವ್ಯಾಯಾಮಕ್ಕೆ ವಿನಿಯೋಗಿಸಿದರೆ ಆರೋಗ್ಯಕರ ಜೀವನ ಸಾಧ್ಯ, ಎಂದು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ, ನಾಯ್ಕ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳವಾರ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ನಾವು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಕಾಲೇಜು ಜೀವನ ಮುಗಿದ ಬಳಿಕವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ […]

ಕಷ್ಟ ಪಡದೆ, ವೇದಿಕೆ ಬಳಸಿಕೊಳ್ಳದೆ ಕಲಾವಿದ ಬೆಳೆಯಲಾರ: ಅರವಿಂದ ಬೋಳಾರ್

Tuesday, August 16th, 2022
Aravinda Bolar

ಮಂಗಳೂರು: ಭವಿಷ್ಯದ ಸುಖಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಡಲು ಸಿದ್ಧವಿರಬೇಕು. ನೋವನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಪ್ರತಿಭೆ ಇದ್ದರೆ, ವೇದಿಕೆ ಸಿಕ್ಕಾಗ ಸೂಕ್ತವಾಗಿ ಬಳಸಿಕೊಂಡರೆ ಮಾತ್ರ ಕಲಾವಿದ ಬೆಳೆಯಲು ಸಾಧ್ಯ, ಎಂದು ಖ್ಯಾತ ಚಲನಚಿತ್ರ ನಟ ಅರವಿಂದ ಬೋಳಾರ್ ಕಿವಿಮಾತು ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ಪ್ರತಿಭಾ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಪ್ಪ- ಅಮ್ಮನ, ಗುರುಹಿರಿಯರ ಆಶೀರ್ವಾದವಿಲ್ಲದೆ ಯಾವುದೂ ಸಾಧ್ಯವಿಲ್ಲ. ಅವರ ಬೈಗುಳ ನಮಗೆ ಶಾಪವಾಗದು, ಎಂದರು. “ಸೋಲನ್ನು […]

ವಿವಿ ಕಾಲೇಜು: ವಿಶ್ವ ಪೇಪರ್ ಬ್ಯಾಗ್ ದಿನಾಚರಣೆ

Wednesday, July 13th, 2022
paper Bag day

ಮಂಗಳೂರು; ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿಯ ಗ್ರಂಥಾಲಯ, ಸಸ್ಯಶಾಸ್ತ್ರ ವಿಭಾಗ ಮತ್ತು ಪರಿಸರ ಸಂಘ ವತಿಯಿಂದ ಮಂಗಳವಾರ ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಗ್ರಂಥಪಾಲಕಿ ಡಾ. ವನಜಾ, ಪ್ರತಿ ವರ್ಷ ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸ್ನೇಹಿ ಪರ್ಯಾಯಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಬಹು ಸೂಕ್ತ, ಎಂದರು. ಪರಿಸರ ಸಂಘದ ಸಂಯೋಜಕ ಡಾ. ಸಿದ್ಧರಾಜು […]

ವಿವಿ ಕಾಲೇಜು: ಸ್ನಾತಕ ಪದವಿ ಪ್ರವೇಶಾತಿ ಆರಂಭ

Wednesday, June 22nd, 2022
University-College

ಮಂಗಳೂರು : ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜೂನ್ 20 ರಿಂದ ಶೈಕ್ಷಣಿಕ ವರ್ಷ 2022-23ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳಿಗೆ ಪ್ರವೇಶಾತಿ ಪ್ರಾರಂಭಿಸಲಾಗಿದೆ. ಈ ಬಾರಿ ಪ್ರವೇಶ ಪ್ರಕ್ರಿಯೆಗಳು UUCMS (Unified University & College Management System) ತಂತ್ರಾಂಶದ ಮೂಲಕ ನಡೆಯಲಿರುವುದರಿಂದ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಸಧ್ಯಕ್ಕೆ ತಮ್ಮ ಮಾಹಿತಿಯನ್ನು ಕಾಲೇಜಿನ ಕಛೇರಿಯಲ್ಲಿರುವ ನೋಂದಣಿ ಪುಸ್ತಕದಲ್ಲಿ ದಾಖಲಿಸತಕ್ಕದ್ದು.ಮಂಗಳೂರುನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜೂನ್ 20 ರಿಂದ ಶೈಕ್ಷಣಿಕ ವರ್ಷ 2022-23ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳಿಗೆ ಪ್ರವೇಶಾತಿ […]

ವಿವಿ ಕಾಲೇಜು: ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿನ್ಯಾಸ್ ವಿ ಆಯ್ಕೆ

Friday, March 11th, 2022
vinyas

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ವಿಜ್ಞಾನ ಪದವಿಯ ವಿನ್ಯಾಸ್ ವಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಧೀರಜ್, ಸಹಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ವಿಜ್ಞಾನ ಪದವಿಯ ಅಪರ್ಣಾ ಶೆಟ್ಟಿ ಹಾಗೂ ಲಲಿತಾ ಕಲಾ ಸಂಘದ ಸಹಕಾರ್ಯದರ್ಶಿಯಾಗಿ ತೃತಿಯ ಕಲಾ ಪದವಿಯ ಕಾವ್ಯ ಎನ್ ಕೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ ಎಂ […]

ವಿವಿ ಕಾಲೇಜು: ಮಹಿಳಾ ದಿನಾಚರಣೆಯಂದೇ ಮಹಿಳಾ ವೇದಿಕೆಗೆ ಚಾಲನೆ

Tuesday, March 8th, 2022
Womens Day

ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪೂರ್ವತನ ಪ್ರಾಂಶುಪಾಲ ಡಾ. ಹರೀಶ್ ಎ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಆಂಗ್ಲ ವಿಭಾಗ ಮುಖ್ಯಸ್ಥೆ ಡಾ. ಎನ್ ಕೆ ರಾಜಲಕ್ಷ್ಮೀ, ಮಹಿಳೆ ಅಥವಾ ಪುರುಷನನ್ನು ಒಂದು ಚೌಕಟ್ಟಿನೊಳಗಿಡುವುದು ಸರಿಯಲ್ಲ. ಮಹಿಳೆ ಸಂತೋಷದ ಸೆಲೆ, ಪ್ರೀತಿಯೇ ಅವಳ ಶಕ್ತಿ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ತಮ್ಮನ್ನು ಯಾವುದೇ […]

ಗ್ರಾಹಕರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರವೆಂಬ ಅಸ್ತ್ರ: ಕೆ ಜಿ ಕುಲಕರ್ಣಿ

Thursday, March 3rd, 2022
Kulkarni

ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರ ವೇದಿಕೆಯಡಿ ಪರಿಹಾರ ಪಡೆಯಬಹುದಾಗಿದೆ, ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, ʼಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ […]