ರವಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು 410 ಕೊರೊನಾ ಸೋಂಕು ಪತ್ತೆ, 6 ಮಂದಿ ಸಾವು, ಉಡುಪಿ ಜಿಲ್ಲೆ 162

Sunday, August 1st, 2021
corona virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ರವಿವಾರ ಪತ್ತೆಯಾದ ಕೇಸುಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು (410) ಪಾಸಿಟಿವ್ ಪ್ರಕರಣ ವರದಿಯಾಗಿವೆ. ದ.ಕ. ಜಿಲ್ಲೆಯಲ್ಲಿ ರವಿವಾರ 410 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇದೇ ವೇಳೆ 6 ಮಂದಿ ಸಾವನ್ನಪ್ಪಿದ್ದು, 264 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,943 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 1,00,780 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 1,430 ಮಂದಿ ಸಾವನ್ನಪ್ಪಿದ್ದಾರೆ. 96,407 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು […]

ಹೈಫೈ ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಉಚಿತ ವೈಫೈ!

Friday, January 24th, 2014
Mohandas-Pai

ಬೆಂಗಳೂರು : ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ, ಜ.24ರಿಂದ ಎರಡು ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಘೋಷಿಸಿದ್ದ ಈ ಯೋಜನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. `ನಮ್ಮ ವೈಫೈ` ಹೆಸರಿನಲ್ಲಿ ಈ ಸೇವೆ ಆರಂಭವಾಲಿದೆ. ಈ ಮಹತ್ವದ ಯೋಜನೆಗಾಗಿ ಸರ್ಕಾರ ಡಿ-ವಿಯೋಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಹಂತದಲ್ಲಿ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ […]

ಸುನಂದಾ ಸಾವಿನ ತನಿಖೆ ಕ್ರೈಮ್ ಬ್ರಾಂಚ್ ಪೊಲೀಸರಿಗೆ

Friday, January 24th, 2014
Sunanda-Pushkar

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಒಳಗೊಂಡ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪ್ರಕರಣನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಸುನಂದಾ ಸಾವಿನ ತನಿಖೆ ನಡೆಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕರಣದ ಹತ್ಯೆ ಅಥವಾ ಆತ್ಮಹತ್ಯೆಯ ವಿವಿಧ ಕೋನಗಳನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಔಷಧಿಯ ಅತಿಸೇವನೆಯಿಂದ ವಿಷಕಾರಿಯಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ತರೂರ್ ಜತೆ […]

2005ಕ್ಕಿಂತ ಹಳೆಯ ನೋಟುಗಳನ್ನು ಮರಳಿ ಪಡೆಯುತ್ತಿರುವ ಆರ್‌ಬಿಐ

Friday, January 24th, 2014
500-1000-notes

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ 2005ರ ಮಾರ್ಚ್ 31 ರಿಂದ ಹಳೆಯ ನೋಟುಗಳನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಿದೆ. ಮಾರ್ಚ 2014ರವರೆಗಿನ ಎಲ್ಲಾ ಹಳೆಯ ನೋಟುಗಳನ್ನು ಮರಳಿ ಪಡೆಯಲು ಆರ್‌‌ಬಿಐ ನಿರ್ಧರಿಸಿದೆ. ಎಪ್ರಿಲ್‌ ತಿಂಗಳಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ ಹೊಸ ನೋಟುಗಳನ್ನು ಪಡೆಯಬಹುದು ಎಂದು ಆರ್‌‌ಬಿಐ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ 2005ಕ್ಕಿಂತ ಹಳೆಯ ನೋಟುಗಳು ಚಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರ್ಥವಲ್ಲ. ಜುಲೈ 2014ರ ನಂತರ ನಿಮ್ಮ ಹತ್ತಿರ 2005ಕ್ಕಿಂತ ಹಳೆಯ […]

ಕಾಸರಗೋಡಿನಲ್ಲಿ ಮನೆಗೆ ಬೆಂಕಿ ಬಿದ್ದು ನಾಲ್ಕು ಮಂದಿ ಸಜೀವ ದಹನ

Tuesday, August 20th, 2013
Four members of family found burnt inside house at Kannur

ಕಾಸರಗೋಡು:  ಮನೆಗೆ ಬೆಂಕಿ ಬಿದ್ದ ಪರಿಣಾಮ ಸೋಮವಾರ ತಡರಾತ್ರಿ ನಿದ್ದೆಯಲ್ಲಿದ್ದ ನಾಲ್ಕು ಮಂದಿ ಸಜೀವ ದಹನಗೊಂಡ ದುರ್ಘಟನೆ ಕಣ್ಣೂರಿನ ಚೆರುಪುಳದಲ್ಲಿ ನಡೆದಿದೆ. ಸುಟ್ಟು ಕರಕಲಾಗಿರುವ ನಾಲ್ಕು ಶವಗಳು ಕೋಣೆಯಲ್ಲಿ ಪತ್ತೆಯಾಗಿದೆ ಈ ದುರ್ಘಟನೆಯಲ್ಲಿ ಸಾಜಿ (42), ಮತ್ತು  ಸಿಂಧು(31) ಮತ್ತು ಅವರ ಮಕ್ಕಳಾದ ಅಧೀರಾ (10), ಮತ್ತು  ಅತುಲ್ಯ(5) ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದಿತ್ತೇ ಅಥವಾ ಇದು ಸಾಮೂಹಿಕ ಆತ್ಮಹತ್ಯೆಯೇ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಎಲ್ಲಾ ಶವಗಳು ಒಂದೇ ಕೋಣೆಯಲ್ಲಿ ಸಿಕ್ಕಿರುವ ಕಾರಣ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದೆಂದು […]

ಕಾರ್ಕಳದ ಬೆಳುವಾಹಿಯಲ್ಲಿ ಆರಂಭಗೊಂಡ ಚಿಟ್ಟೆಪಾರ್ಕ್

Sunday, August 18th, 2013
Ingurated in Karkala Beluvahi Buterfly Park

ಮಂಗಳೂರು : ಕಾರ್ಕಳದ ಬೆಳುವಾಹಿಯಲ್ಲಿ ಸಮೀಪ ಚಿಟ್ಟೆಗಳಿಗಾಗಿ ನಿರ್ಮಿಸಲ್ಪಟ್ಟ  ಚಿಟ್ಟೆಪಾರ್ಕನ್ನು ಆಗಸ್ಟ್ 18ರಂದು ಶಾಸಕರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಿದರು. ನಂತರ ಮಾರ್ತಾಡಿ ಪರಿಸರ ಮಾಲಿನ್ಯದಿಂದ ಚಿಟ್ಟೆಗಳು ನಾಶವಾಗುತ್ತಿವೆ.ಈ ಚಿಟ್ಟೆಪಾರ್ಕ್ ಚಿಟ್ಟೆಗಳಿಗೆ ಆಶ್ರಯತಾನವಾಗಿದೆ.ನಗರಪ್ರದೇಶದ ಜನರಿಗೆ ಮತ್ತು ಪ್ರವಾಸಿಗರಿಗೆ ಚಿಟ್ಟೆಗಳನ್ನು ವಿಕ್ಷೀಸಲು ಅನುಕೂಲವಾಗುತ್ತದೆ ಎಂದರು. ಬಳಿಕ ಸಮ್ಮಿಲನ್ ಶೆಟ್ಟಿ ಮಾತಾಡಿ ಇದುವರೆಗೆ ಸುಮಾರು 113 ಚಿಟ್ಟೆ ಪ್ರಭೇದಗಳು ಪತ್ತೆಯಾಗಿದೆ. ಪಶ್ಚಿಮ ಘಟ್ಟ ತಪ್ಪಲಿನ,ಕಾಂತವರ ಬಳಿ ಇರುವ ಈ ಪಾರ್ಕ್ ಸುಮಾರು 7.35 ಎಕ್ರೆಯಲ್ಲಿ ಸ್ವಂತ ಜಾಗದಲ್ಲಿ ನಿರ್ಮಿಸಲಾಗಿದೆ. […]

ಮಂಗಳೂರಿನ ನೆಹರೂ ಮೈದಾನಿನಲ್ಲಿ 67ನೇ ಸ್ವಾತಂತ್ರ್ಯೊತ್ಸವ ಆಚರಣೆ

Thursday, August 15th, 2013
independence-day

ಮಂಗಳೂರು : ಆಗಸ್ಟ್ 15 ಇಂದು ನಗರದ ನೆಹರೂ ಮೈದಾನದಲ್ಲ್ಲಿ 67ನೇ ಸ್ವಾತಂತ್ರ್ಯೊತ್ಸವ ಸಮಾರಂಭವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ರಮನಾಥ ರೈಯವರು ಧ್ವಜರೋಹನವನ್ನು ನೆರವೇರಿಸಿದರು. ನಂತರ ಮಾತಾಡಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 67 ವರ್ಷಗಳಾದವು, ಮಹಾತ್ಮಗಾಂಧಿ ಹಾಗೂ ಹಲವಾರು ಮಹನೀಯರು ಅಹಿಂಸ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುಧ್ದ ಹೋರಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯ ನಾಯಕರಿಗೆ ಮತ್ತು ಪ್ರಜೆಗಳಿಗೆ ಸತ್ಯ, ಅಹಿಂಸೆ ಮತ್ತು ಶಾಂತಿಸಹಿಸ್ಣುತೆಗಳೇ ತಾರಕಮಂತ್ರಗಳಾಗಿದ್ದವು […]

ಮೀನುಗಾರಿಕಾ ದೋಣಿ ಮುಳುಗಿ 6 ಮಂದಿ ಮೀನುಗಾರರು ನಾಪತ್ತೆ

Friday, September 16th, 2011
ಮೀನುಗಾರಿಕಾ ದೋಣಿ ಮುಳುಗಿ 6 ಮಂದಿ ಮೀನುಗಾರರು ನಾಪತ್ತೆ

ಮಂಗಳೂರು: ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ 6 ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ಅರಬಿ ಸಮುದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ‘ಓಶಿಯನ್‌ ಫಿಶರೀಸ್‌- 2’ ಎಂಬ ಮೀನುಗಾರಿಕಾ ದೋಣಿಯಲ್ಲಿ 8 ದಿನಗಳ ಹಿಂದೆ 7 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನು ಹಿಡಿದು ಹಿಂದಿರುಗುತ್ತಿದ್ದಾಗ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ದುರ್ಘ‌ಟನೆ ಸಂಭವಿಸಿದೆ. ದೋಣಿಯಲ್ಲಿದ್ದ ೭ಜನರ ಪೈಕಿ ದೋಣಿಯ ಚಾಲಕ ಬಳ್ಳಾರಿ ಹೊಸಪೇಟೆಯ ಕಾಂಬ್ಲಿಪುರ ಕಂಟರ್‌ಬಿನ್ನೆಯ ಶ್ರೀಕಾಂತ್‌, ಕೊಪ್ಪಳದ ನಾರಾಯಣ, ಮಂಗಳೂರು ಪಂಜಿಮೊಗರಿನ […]

ನಾಡಿನೆಲ್ಲೆಡೆ ಶೃದ್ದಾ ಭಕ್ತಿಯ ‘ನಾಗರಪಂಚಮಿ’

Thursday, August 4th, 2011
Nagara Panchami/ನಾಗರಪಂಚಮಿ

ಮಂಗಳೂರು : ಇಂದು ದೇಶದಾದ್ಯಂತ ನಾಗರ ಪಂಚಮಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ‘ನಾಗರ ಪಂಚಮಿ’ ಕೃಷಿ ಮತ್ತು ಮಳೆಯಿಂದಾಗಿ ಸ್ಥಗಿತಗೊಂಡಿದ್ದ ನಮ್ಮ ಎಲ್ಲ ಶ್ರದ್ಧೆಯ, ಉತ್ಸಾಹದ ಆಚರಣೆಗಳೆಲ್ಲ ಮತ್ತೆ ಆರಂಭವಾಗುವ ಮೊದಲ ಹಬ್ಬ. ನಾಡಿಗೆ ದೊಡ್ಡ ಹಬ್ಬವೆಂದೇ ಪ್ರತೀತಿ. ಆಟಿ ತಿಂಗಳ ಅಮಾವಾಸ್ಯೆ ಯಂದು ಕಹಿ ಮದ್ದು ಸೇವಿಸಿ ನಮ್ಮ ಮೂಲದ ನಾಗನ ಸ್ಥಾನಕ್ಕೆ ಹೊರಡಲು ಸಿದ್ಧತೆಗಳಾಗುತ್ತವೆ. ಮುಂದೆ ಐದನೇ ದಿನ ‘ನಾಗರಪಂಚಮಿ’ ಅಥವಾ ‘ನಾಗ ಪಂಚಮಿ’. ನಾಗನಿಗೆ ಹಲವು ನಾಮಗಳಿವೆ, ಉಭಯ ಜೀವಿಗಳಲ್ಲಿ ಹೆಚ್ಚು ಶಕ್ತಿ […]

ಮಂಗಳೂರು ಮಹಾನಗರಪಾಲಿಕೆಗೆ ವಾಮಾಚಾರ ಮಂತ್ರಿಸಿದ ತಗಡು, ನಿಂಬೆಹಣ್ಣು, ಕುಂಬಳಕಾಯಿ ಪತ್ತೆ

Tuesday, July 5th, 2011
Vamachara/ವಾಮಾಚಾರ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಚೇರಿಯೆದುರು ಇಂದು ಮುಂಜಾನೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿದೆ. ಮೇಯರ್ ಪ್ರವೀಣ್ ಕುಮಾರ್ ಅವರ ಕಾರು ನಿಲ್ಲುವ ಜಾಗದಲ್ಲಿ ಮಂತ್ರಿಸಿದ ತಗಡು,ನಿಂಬೆಹಣ್ಣು,  ಕುಂಬಳಕಾಯಿಯನ್ನು ಕಡಿದು ಅದಕ್ಕೆ ಕುಂಕುಮ ಸುರಿಯಲಾಗಿದೆ.ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಮುಂಜಾನೆ ಕಾವಲು ಕಾಯುವ ವಾಚ್‌ಮೆನ್‌ಗೆ ವಾಮಾಚಾರದ ಕುರುಹು ಪತ್ತೆಯಾಗಿವೆ.ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪಾಲಿಕೆಗೆ ವಾಚ್‌ಮೆನ್‌ ಇದ್ದರೂ,ರಾತ್ರಿಯ ವೇಳೆ ಯಾರೋ ವಾಚ್‌ಮೆನ್ ಕಣ್ಣು ತಪ್ಪಿಸಿ ವಾಮಾಚಾರ ಮಾಡಿರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹು ಕೂಡಾ […]