ನಳಿನ್ ಕುಮಾರ್ ಹಾಗು ಮೋದಿ ಜಯಗಳಿಸಿದ್ದಕ್ಕೆ ಕಟೀಲಿಗೆ ಪಾದಯಾತ್ರೆ ಹೊರಟ ಯುವಕ

12:07 AM, Saturday, May 31st, 2014
Share
1 Star2 Stars3 Stars4 Stars5 Stars
(5 rating, 5 votes)
Loading...

Padayatre

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರಧಾನಿ ಮೋದಿ ಜಯಗಳಿಸಿದರೆ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಪಕ್ಷದ ಸಕ್ರಿಯ ಯುವ ಕಾರ್ಯಕರ್ತ ಅವಿಷಿತ್ ರೈ ಶುಕ್ರವಾರ ಸಂಜೆ ತಮ್ಮ ಹರಕೆಯನ್ನು ಪೂರೈಸಲು ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಿದರು.

ನಗರದ ಅವಿಷಿತ್ ರೈ ಬಿಜೆಪಿ ಪಕ್ಷ ಹಾಗೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಕಟೀಲ್ ಹಾಗು ಮೋದಿ ಜಯಗಳಿಸಿದಲ್ಲಿ ಪಾದಯಾತ್ರೆ ಹೊರಡುವುದಾಗಿ ಕಟೀಲು ದೇವಿಯಲ್ಲಿ ಹರಕೆ ಹೊತ್ತಿದ್ದರು. ನಳಿನ್ ಕುಮಾರ್ ಹಾಗೂ ನರೇಂದ್ರ ಮೋದಿ ಭರ್ಜರಿ ಜಯಗಳಿಸಿದ್ದುದರಿಂದ ಪಕ್ಷದ ಮುಖಂಡರ ಸಮ್ಮುಖ ಶುಕ್ರವಾರ ಸಂಜೆ ಪಾದಯಾತ್ರೆ ಆರಂಭಿಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಕಿಶೋರ್ ಭಂಡಾರಿ, ಗಣೇಶ್ ಕಾರ್ಣಿಕ್ ಹಾಗು ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾದಯಾತ್ರೆ ಪ್ರಾರಂಭದ ಸಂದರ್ಭ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English