ಮಂಗಳೂರು : ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ಎಪ್ರಿಲ್ 1 ರಿಂದ ಆರಂಭವಾಗಿರುವ ನೇಮಕಾತಿ ರಾೄಲಿಗೆ ರಾಜ್ಯದ 11 ಜಿಲ್ಲೆಗಳಿಂದ ಸುಮಾರು 3800 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆಯೆಂದು ನೆಮಕಾತಿ ರ್ಯಾಲಿಯ ಮುಖ್ಯ ಬ್ರಿಗೇಡಿಯರ್ ಎಂ.ಎಂ.ಗುಪ್ತಾ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
ಅವರು ಮಂಗಳಾ ಕ್ರೀಡಾಂಗಣದಲ್ಲಿ ಇಂದು ನಡೆದ ಅಭ್ಯರ್ಥಿಗಳ ಸಂದರ್ಶನದ ವೇಳೆಯಲ್ಲಿ ಮಾತನಾಡಿ, ಭಾರತೀಯ ಸೇನೆಗೆ ನೇಮಕ ವಾದಲ್ಲಿ ಆರಂಭದಲ್ಲೆ ರೂ.15,000 ಮೇಲ್ಪಟ್ಟು ವೇತನ ಸಿಗಲಿದೆ.ಇದರ ಜೊತೆಗೆ ಆಕರ್ಷಕ ಭತ್ಯೆಗಳು ದೊರೆಯಲಿವೆ. ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಎಪ್ರಿಲ್ 14 ರಿಂದ ರಾೄಲಿ ನಡೆಯಲಿದ್ದು ಅಲ್ಲಿ ಸಹ ದ.ಕ.ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ದಾಖಲೆಗಳು ಕ್ರಮಬದ್ಧವಾಗಿದ್ದು, ಅಭ್ಯರ್ಥಿಯ ದೇಹಜದಾಡ್ರ್ಯತೆ ತೃಪ್ತಿಕರವಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದೆಂದರು.
ಕಮಾಂಡರ್ ಸಿ.ಆರ್. ದೇಶಪಾಂಡೆ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English