ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂಬಿ ಹೇಳಿದ್ದೇನು!?

5:51 PM, Saturday, March 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ambareeshಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಏಪ್ರಿಲ್ 2 ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ತಿಳಿಸಿದ್ದಾರೆ.

ನಗರದಲ್ಲಿ ಇಂದು ನಡೆದ ಬೆಂಬಲಿಗರ ಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯ ಎಲ್ಲ ಗೌರವಗಳನ್ನು ಸಿಗುವಂತೆ ಮಾಡಿದೆ. ಸಿನಿಮಾ ಮತ್ತು ರಾಜಕೀಯದಲ್ಲಿ ಸೋಲು, ಗೆಲುವು ಕಂಡಿದ್ದೇನೆ. ಹಾಗಾಗಿ ಎಲ್ಲವನ್ನು ಸಮಚಿತ್ತದಿಂದ ಕಾಣುವುದಾಗಿ ಹೇಳಿದರು.

ನನ್ನನ್ನು ನಾಯಿ, ಕತ್ತೆ ಎಂದೆಲ್ಲ ಹೇಳಿದರು. ನಾಯಿಯ ನಿಷ್ಠೆ, ಕತ್ತೆಯ ಶ್ರಮ ನೆನಪಿಸಿಕೊಳ್ಳಬೇಕಿದೆ. ನನಗೆ ಮೊದಲಿನಂತೆ ಆರೋಗ್ಯ ಸರಿಯಿಲ್ಲ. ಸಿಂಗಾಪುರಕ್ಕೆ ಹೋಗಿ ಬಂದ ಮೇಲೆ ಪುನರ್ ಜನ್ಮ ಪಡೆದಿದ್ದೇನೆ. ಬೆಂಬಲಿಗರಿಂದ ನೀವು ಸ್ಪರ್ಧಿಸಲೇಬೇಕೆಂದು ಒತ್ತಡ ಹೆಚ್ಚುತ್ತಿದೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.

ರಾಜಕೀಯಕ್ಕೆ ಬಂದ ಮೇಲೆ ಸೋಲು, ಗೆಲುವುಗಳು ಸಹಜವಾಗಿಯೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ನಮ್ಮನ್ನು ಬೈಯ್ದದ್ದು ಇದೆ. ಅದ್ಯಾವುದಕ್ಕೂ ಬೇಸರ ಮಾಡಿಕೊಳ್ಳದೆ ಎಲ್ಲವನ್ನು ಸಹಜವಾಗಿ ಪರಿಗಣಿಸುವುದಾಗಿ ಹೇಳಿದರು.

ಪ್ರಸ್ತುತ ರಾಜಕೀಯ ಮೊದಲಿನಂತಿಲ್ಲ. ಈ ಬಗ್ಗೆ ನಿಮಗೂ ಗೊತ್ತಿದೆ. ಹಾಗಾಗಿ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English