ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ: ಪಾನಿಪುರಿ ಕಿಟ್ಟಿ

5:04 PM, Monday, September 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

kitty-2ಬೆಂಗಳೂರು: ನಾನು ಆದಷ್ಟು ಪ್ರಯತ್ನ ಮಾಡ್ತಿದ್ದೀನಿ. ಕಾನೂನು ಮೊರೆ ಹಾಗೂ ಫಿಲ್ಮ್ ಚೇಂಬರ್ ಮೊರೆಯೂ ಹೋಗಿದ್ದೀನಿ. ಎಷ್ಟು ಸಾಧ್ಯವೋ ಅಷ್ಟು ಹೋರಾಡ್ತೀನಿ. ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ.

ಈ ಪ್ರಕರಣ ಕುರಿತು ಫಿಲ್ಮ್ ಚೇಂಬರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಹಾಗೂ ವಿಜಿ ನಡುವೆ ಯಾವುದೇ ದ್ವೇಷ ಇಲ್ಲ. ಆದರೆ ನನ್ನ ಅಣ್ಣನ ಮಗ ಮಾರುತಿ ಗೌಡ ಜೊತೆಯಲ್ಲಿ ನಡೆದಿರುವ ಘಟನೆಯಿಂದ ಸಿಟ್ಟು ಬಂದಿದೆ. ಯಾವುದೇ ನಟ ಮಾದರಿ ಆಗಬೇಕು ಎಂದು ಕಿಟ್ಟಿ ತಿಳಿಸಿದ್ದಾರೆ.

ನಟ ದುನಿಯಾ ವಿಜಯ್ ಹಾಗೂ ಟೀಂನಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ ಎಂದು ಪಾನಿಪುರಿ ಕಿಟ್ಟಿ ತಿಳಿಸಿದ್ದಾರೆ.

ತುಟಿಗೆ 14 ಹೊಲಿಗೆ ಹಾಕಿದರೂ ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊದಿಕೊಂಡಿದೆ. ರಾತ್ರಿಪೂರ್ತಿ ಕತ್ತು ನೋವು‌ ಎನ್ನುತ್ತಿದ್ದ. ಎರಡೂ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಎಂದು ಹೇಳಿದ್ದಾರೆ.

ಏನೇ ತಿಂದರೂ ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ.‌ ತುಟಿಗೆ ಗಾಯ ಸಂಬಂಧ ಸಿಟಿ ಸ್ಕ್ಯಾನ್ ರಿಪೋರ್ಟ್ಗಾಗಿ ಕಾಯುತ್ತಿದ್ದೇವೆ. ನಾವು ಡಿಸಿಎಂ ಭೇಟಿಗೆ ಬಂದಿದ್ದೇವೆ. ಈಗ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English