ಅತ್ಯಾಚಾರ ಆರೋಪಿಗಳ ಬದಲಿಗೆ ಅಮಾಯಕರ ಬಂಧನ..!

11:14 AM, Wednesday, September 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

kankanadyಮಂಗಳೂರು: ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಹುಡುಕುತ್ತಿದ್ದ ಪೊಲೀಸರು ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ನಡೆದಿದೆ.

ಕಡಬ ನಿವಾಸಿ ಜೋಬಿನ್ ಮತ್ತು ಶಿರಾಡಿಯ ವರ್ಗಿಸ್ ಅವರ ಚಿಕ್ಕಪ್ಪ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಜೋಬಿನ್ ಮತ್ತು ವರ್ಗೀಸ್ ಬಂದಿದ್ದರು. ಇವರು ಆಸ್ಪತ್ರೆಯಿಂದ ಹೊರಬಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹೋಟೆಲ್ನಿಂದ ಹೊರಡುತ್ತಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಮೊಬೈಲ್ನ್ನು ಕೊಟ್ಟು ಇದರಲ್ಲಿ ಕೊನೆಯಲ್ಲಿ ಡಯಲ್ ಮಾಡಿದ ನಂಬರನ್ನು ತೋರಿಸಲು ಹೇಳಿದ್ದಾರೆ. ಮಹಿಳೆಗೆ ಕೊನೆಯ ನಂಬರನ್ನು ತೋರಿಸಿ ಸಹಾಯ ಮಾಡಲು ಮುಂದಾಗುತ್ತಿದ್ದಂತೆ ಮಫ್ತಿಯಲ್ಲಿದ್ದ ಪೊಲೀಸರು ಇವರಿಬ್ಬರನ್ನು ಎಳೆದು ಹಲ್ಲೆ ಮಾಡಿ, ಕಂಕನಾಡಿ ನಗರ ಠಾಣೆಗೆ ತಂದು ಪ್ಯಾಂಟ್ ಶರ್ಟ್ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಅವರ ಮೊಬೈಲ್,ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದಾರೆ.

ಅಸಲಿಗೆ ಪೊಲೀಸರು ಅತ್ಯಾಚಾರ ಪ್ರಕರಣವೊಂದರಲ್ಲಿ ಇಬ್ಬರು ಯುವಕರನ್ನು ಹುಡುಕುತ್ತಿದ್ದರಂತೆ. ಯುವಕರು ನಗರದಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಹೋಟೆಲ್ನಿಂದ ಹೊರ ಬಂದ ಈ ಯುವಕರೆ ಅತ್ಯಾಚಾರ ಪ್ರಕರಣದ ಆರೋಪಿಗಳೆಂದು ಎಳೆದೊಯ್ದು ಈ ರೀತಿ ಅನಾಗರಿಕವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English