ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬುಧವಾರ ಬೆಳಗಿನ ಜಾವ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಡೆದಿದೆ.
ಲಾರಿ ತೆರವುಗೊಳಿಸಲು ಚಾರ್ಮಾಡಿ ಹಸನಬ್ಬ ತಂಡ ಸಹಕರಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಶಿರಾಡಿ ಘಾಟಿ ಸಂಚಾರಕ್ಕೆ ತೆರವು ಆಗುವವರೆಗೆ ಇಲ್ಲಿ ಕ್ರೇನ್ ಒಂದರ ವ್ಯವಸ್ಥೆ ಮಾಡಿ ಕೊಡಬೇಕೆಂದು ಹಸನಬ್ಬ ಅವರು ಬೇಡಿಕೆ ಇಟ್ಟಿರುವ ಕುರಿತು ಉದಯವಾಣಿಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಇನ್ನೂ ಕ್ರೇನ್ ವ್ಯವಸ್ಥೆ ಮಾಡಿಲ್ಲ.
Click this button or press Ctrl+G to toggle between Kannada and English