ರಾಮನಗರ : ತೋಟದ ಮನೆಯಲ್ಲಿ ಹತ್ತು ವರ್ಷದ ಕೆಳಗಿನ ತಮ್ಮ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳಿಗೆ ಬಾಡೂಟ ಉಣಬಡಿಸಿ, ಮದ್ಯ ಕುಡಿಸಿ, ಅದನ್ನು ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟು ಘಟನೆ ಕನಕಪುರ ತಾಲೂಕಿನ ಮರಳಿಪುರ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತೋಟದ ಮಾಲೀಕನನ್ನು ಬಂಧಿಸಲಾಗಿದೆ.
ಬಾಯಿಗೆ ಬಂದ ರೀತಿ ಕೆಟ್ಟಕೆಟ್ಟಪದಗಳನ್ನು ಬಳಸಿ 7ರಿಂದ 8 ಮಕ್ಕಳು ಬಾಡೂಟ ಸವಿಯುತ್ತಾ, ಮದ್ಯ ಕುಡಿಯುತ್ತಾ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಮಕ್ಕಳು ಆಡುತ್ತಿರುವ ಭಾಷೆಯು ಮಳವಳ್ಳಿ ಭಾಗಕ್ಕೆ ಹೋಲಿಕೆಯಾಗಿದ್ದ ಕಾರಣ ಪತ್ತೆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣದ ತನಿಖೆ ನಡೆಸಿ ತೋಟದ ಮನೆ ಮಾಲೀಕ ಗಣೇಶ್ನನ್ನು ಬಂಧಿಸಿದ್ದಾರೆ. ಗಣೇಶ್ ಸೇರಿದಂತೆ ಇದೇ ಗ್ರಾಮದ ಪ್ರಮೋದ್, ಸೋಮಸುಂದರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಮಾಲಿಕನಿಗೆ ಗಣೇಶ್ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಡಿವೈಎಸ್ಪಿ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
Click this button or press Ctrl+G to toggle between Kannada and English