ಆಸ್ಕರ್ ಫರ್ನಾಂಡೀಸ್ ರವರ ಆರೋಗ್ಯ ಸುಧರಣೆಗಾಗಿ ಮಂಗಳೂರಿನ. ಭಿಷಪ್ ಹೌಸ್ ನ ಚಾಪಲಿನಲ್ಲಿ ಸಾರ್ವಜನಿಕ ಪ್ರಾರ್ಥನೆ

8:13 PM, Wednesday, July 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Oscar Prayer   ಮಂಗಳೂರು  : ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ರವರ ಆರೋಗ್ಯ ಸುಧಾರಣೆ ಗಾಗಿ ಮತ್ತು ಬೇಗನೆ ಗುಣಮುಖರಾಗಲು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ರವರ ನೇತೃತ್ವದಲ್ಲಿ ಸಾರ್ವಜನಿಕ ಪ್ರಾರ್ಥನೆ ಹಮ್ಮಿಕೊಳ್ಳಲಾಯಿತು. ಧರ್ಮಗುರುಗಳು ಪಾದರ್ ಕ್ಲಿಫರ್ಡ್, ಫಾ. ಒಲೇನ್ ಡಿ ಸೋಜ, ಫಾ.ಮ್ಯಾಕ್ಸಿಮ್, ಜೆ.ವಿ. ಡಿ ಸೋಜ, ಇವರು ಗಳು ವಿಶೇಷ ಪೂಜೆ ನೆರವೇರಿಸಿ, ಕೇಂದ್ರ ಸಚಿವ ರಾಗಿ ಸಂಸದರಾಗಿ ಜನರಿಗೆ ನೀಡುವ ಸೇವೆ ಅಪಾರ ವಾಗಿದ್ದು, ಅವರ ಸೇವೆಯ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಮೂಲಕ ದೇವರಿಗೆ ಮೆಚ್ಚುವ ಕೆಲಸ ಮಾಡಿದ ಅವರು ಬೇಗನೇ ಗುಣಮುಖರಾಗ ಎಂದು ಧಾರ್ಮಿಕ ನಾಯಕರುಗಳು ಪ್ರಾರ್ಥಿಸಿದರು

ಈ ಸಂಧರ್ಭದಲ್ಲಿ ಸಂಸದರು ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎ ಐ ಸಿಸಿ ಕಾರ್ಯದರ್ಶಿ ಮೋಹನ್ ಪೀ.ವಿ., ಕಾರ್ಪೊರೇಟರ್ ನವೀನ್ ಡಿ ಸೋಜ, ಲ್ಯಾನ್ಸಿ ಲೋಟ್ ಪಿಂಟೋ, ಕೆ ಪಿ ಸಿ ಸಿ ಕಾರ್ಯದರ್ಶಿ ಗಫೂರ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕಡವೂರು, ಕ್ರೈಸ್ತ ಸಂಘಟಕ ಪ್ರಮುಖ ನಾಯಕರು ಗಿಲ್ಬರ್ಟ್ ಡಿ ಸೋಜ, ಅಶಿತ್ ಪಿರೇ ರ, ಕಾಂಗ್ರೆಸ್ ಕಾರ್ಯದರ್ಶಿ ಪಿಯುಸ್ ಮೊಂತೆರೋ, ವಿಜಯ ಜೆಸಿಂತಾ ಆಲ್ಫ್ರೆಡ್, ಅಲ್ಪ ಸಂಖ್ಯಾತ ಮುಂತಾದವರು ಭಾಗವಹಿಸಿದರು.

ನಾಳೆ ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಆಸ್ಕರ್ ಗೋಸ್ಕರ ಪ್ರಾರ್ಥನೆ ಸಲ್ಲಿಸಬೇಕೆಂದು ಎಐಸಿಸಿ . ಕಾರ್ಯದರ್ಶಿ ಐವನ್ ಡಿಸೋಜಾ ರವರು ವಿನಂತಿಸಿದ್ದಾರೆ. ಅವರ ಆರೋಗ್ಯ ಸುಧಾರಣೆ ಪ್ರಾರ್ಥನೆ ಯೊಂದಿಗೆ ಮಾತ್ರ ಸಾಧ್ಯವೆಂದು ನುಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English