ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊನೆಗೂ ಸಿಕ್ಕಿಬಿದ್ದ ಖಾನ್ಗ್ರೆಸ್ ಬ್ರದರ್ಸ್ ಎಂದು ಬರೆದುಕೊಂಡಿದ್ದಾರೆ.
ಸುಖಾಸುಮ್ಮನೆ ಬಿಜೆಪಿ ಕರ್ಯಕರ್ತನ ಮೇಲೆ ಆರೋಪ ಹೊರಿಸಿದ್ದ @ದಿನೇಶ್ ಗುಂಡೂರಾವ್ ಅವರೇ ಎಲ್ಲಿ ಹೋದಿರಿ? ನೀವು ಕ್ಷಮೆ ಕೇಳಲೇಬೇಕು! ಜನರ ದಿಕ್ಕು ತಪ್ಪಿಸುವ ಇಂತಹ ಕೆಳಮಟ್ಟದ ಕೆಲಸ ನಿಮ್ಮ ಮಂತ್ರಿ ಸ್ಥಾನಕ್ಕೆ ಶೋಭೆಯಲ್ಲ! ಸಮೃದ್ಧ ಕರ್ನಾಟಕವನ್ನು ಭಯೋತ್ಪಾದನಾ ತಾಣವಾಗಿ ಪರಿವರ್ತಿಸಲು ಹೊರಟ ಸಿದ್ದರಾಮಯ್ಯ ಸರ್ಕಾರಕ್ಕೆ ಮುರ್ದಾಬಾದ್! ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
Click this button or press Ctrl+G to toggle between Kannada and English