ಅಪಘಾತದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

3:37 PM, Wednesday, April 3rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Man sucide at wellಮಂಗಳೂರು : ಕೆಲ ತಿಂಗಳ ಹಿಂದೆ ನಡೆದ ಅಪಘಾತದಿಂದಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಗರದ ಬಿಕರ್ನಕಟ್ಟೆ ಬಳಿ ನಡೆದಿದೆ.

ಕಳೆದ ಫೆಬ್ರವರಿ ೨೩ ರಂದು ವೆಲೇರಿ ಯನ್ ರೋಡ್ರಿಗಸ್ ಎಂಬವರು ಕಂಕನಾಡಿ ಬಳಿ ತನ್ನ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ೧೨ ವರ್ಷದ  ಬಾಲಕಿಯೊಬ್ಬಳು ಇವರ ಕಾರಿನಡಿಗೆ ಬಿದ್ದು ಮೃತಪಟ್ಟಿದ್ದಳು. ರಸ್ತೆ ದಾಟುವಾಗ ಈ ಅಪಘಾತ ನಡೆದಿತ್ತು. ಈ ಅಪಘಾತದಿಂದ ವೆಲೇರಿಯನ್ ರವರು ಸಾಕಷ್ಟು ನೊಂದಿದ್ದು ಇದೆ ಕಾರಣದಿಂದ ನಿನ್ನೆ ಬೆಳಿಗ್ಗೆ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವೆಲೇರಿಯನ್ ಕೆಲ ತಿಂಗಳ ಹಿಂದಷ್ಟೇ ಕೊಪ್ಪದಲ್ಲಿದ್ದ ತನ್ನ ಆಸ್ತಿಯನ್ನು ಮಾರಿ ಕುಟುಂಬ ಸಮೇತ ಮಂಗಳೂರಿಗೆ ಬಂದಿದ್ದರು. ಜಯಶ್ರೀ ಗೇಟ್ ಸಮೀಪ ಬಾಡಿಗೆ ಮನೆಯಲ್ಲಿದ್ದ ವೆಲೇರಿಯನ್ ಇಲ್ಲೇ ಸಮೀಪ ಕೆಲ ದಿನಗಳ ಹಿಂದಷ್ಟೇ ಹೊಸತೊಂದು ಫ್ಲ್ಯಾಟ್ ಖರೀದಿಸಿದ್ದರು. ಆದಿತ್ಯವಾರವಷ್ಟೇ ಈ ಮನೆಯ ಗೃಹಪ್ರವೇಶ ನಡೆದಿದ್ದು, ವೆಲೇರಿಯನ್ ಅಲ್ಲಿಂದ ಬಂದು ಒಬ್ಬಂಟಿಯಾಗಿ ಜಯಶ್ರೀಗೇಟ್‌ನ ಬಾಡಿಗೆ ಮನೆಯಲ್ಲಿ ಕಳೆದಿದ್ದರು. ಬೆಳಗಾದರೂ ತಂದೆ ಬಾರದಿದ್ದುದನ್ನು ಕಂಡು ನಿನ್ನೆ ಇವರ ಮಕ್ಕಳು ಈ ಬಾಡಿಗೆ ಮನೆಗೆ ಬಂದು ಹುಡುಕಾಡಿದಾಗ ವೆಲೇರಿಯನ್ ಪತ್ತೆಯಾಗಿಲ್ಲ. ಈ ವೇಳೆ ಮನೆ ಸಮೀಪದ ಬಾವಿಯ ಬಳಿ ಇವರ ಚಪ್ಪಲಿ ಕಂಡು ಬಂದಿದ್ದು, ಬಾವಿಯಲ್ಲಿ ನೋಡಿದಾಗ ವೆಲೇರಿಯನ್ ಶವ ತೇಲುವುದು ಕಂಡು ಬಂದಿದೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ, ಅವರು ಬಂದು ಶವವನ್ನು ಮೇಲಕ್ಕೆತ್ತಿದರು. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English