ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ಮಗಳೊಂದಿಗೆ ತೆರಳಿದ ಮಹಿಳೆಯೊಬ್ಬಳು ಕಾಣೆಯಾದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ಸಾಣುರು ಪದವಿನಲ್ಲಿನ ಬಾಬು ಪೂಜಾರಿಯವರ ಪತ್ನಿ ಮೋಹಿನಿ(೩೫) ಮತ್ತು ಮಗಳು ಮನೀಷಾ(೯)
ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಬರುತ್ತೇನೆ ಎಂದು ಮಗಳು ಮನೀಷಾಳೊಂದಿಗೆ ತೆರಳಿದವರು ವಾಪಸ್ ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಈಕೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು ಆತನೊಂದಿಗೆ ತೆರಳಿರಬೇಕೆಂದು ಶಂಕಿಸಲಾಗಿದ್ದು, ಆಕೆಯ ಪತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ
Click this button or press Ctrl+G to toggle between Kannada and English