ಜನ ಸಾಮಾನ್ಯರ ಬ್ಯಾಂಕ್ ವಿಜಯಾಬ್ಯಾಂಕ್ : ಸಂಸ್ಥಾಪಕರ ದಿನಾಚರಣೆಯಲ್ಲಿ ಕೆ.ಎನ್. ವಿಜಯಪ್ರಕಾಶ್

5:42 PM, Saturday, October 23rd, 2010
Share
1 Star2 Stars3 Stars4 Stars5 Stars
(No Ratings Yet)
Loading...

ವಿಜಯಾಬ್ಯಾಂಕ್  ಸಂಸ್ಥಾಪಕರ ದಿನಾಚರಣೆಮಂಗಳೂರು: ಎಂಬತ್ತು ವರ್ಷಗಳ ಹಿಂದೆ ಅತ್ತಾವರ ಬಾಲಕೃಷ್ಣ ಶೆಟ್ಟಿ ಮತ್ತು ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ಸ್ಥಾಪಿಸಿದ ವಿಜಯಾಬ್ಯಾಂಕಿನ  ಸಂಸ್ಥಾಪಕರ ದಿನಾಚರಣೆಯನ್ನು ಇಂದು ಜ್ಯೋತಿಯಲ್ಲಿರುವ ವಿಜಯಾಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು.

ವಿಜಯಾಬ್ಯಾಂಕ್  ಸಂಸ್ಥಾಪಕರ ದಿನಾಚರಣೆ
ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಕೆ.ಎನ್.ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ನಿರ್ದೇಶಕ ಬಿ. ಇಬ್ರಾಹಿಂ ಸಂಸ್ಥಾಪಕರ ಬಾವಚಿತ್ರಗಳಿಗೆ ಪುಷ್ಪ ಮಾಲೆ ಹಾಕುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು.
ಜನ ಸಾಮಾನ್ಯರಿಗೆ ವಿಜಯಾಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ಮಂಗಳೂರು ನಗರ ಅಭಿವೃದ್ಧಿಗೂ ಪಾಲಿಕೆಯೊಂದಿಗೆ ಕೈ ಜೋಡಿಸಿದೆ ಎಂದು ನಗರ ಪಾಲಿಕೆ ಕಮಿಷನರ್ ಕೆ.ಎನ್. ವಿಜಯಪ್ರಕಾಶ್ ಹೇಳಿದರು.
ವಿಜಯಾಬ್ಯಾಂಕಿನ ಇನ್ನಷ್ಟು ಪ್ರಯೋಜನೆಗಳು ಗ್ರಾಮೀಣ ಜನರಿಗೂ ತಲುಪಬೇಕೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ವಿಜಯಾಬ್ಯಾಂಕ್  ಸಂಸ್ಥಾಪಕರ ದಿನಾಚರಣೆ
ವಿಜಯಾಬ್ಯಾಂಕಿನ ಉಪ ಮಹಾಪ್ರಭಂದಕರಾದ ಹರೀಂದ್ರನಾಥ ಶೆಟ್ಟಿ, ಉಮಾನಾಥ, ನಿರ್ದೇಶಕ ಇಬ್ರಾಹಿಂ ಉಪಸ್ಥಿತರಿದ್ದರು.
ಬ್ಯಾಂಕಿನ ಉಪ ಮಹಾಪ್ರಭಂದಕ ಹರೀಂದ್ರನಾಥ ಶೆಟ್ಟಿ ಸ್ವಾಗತಿಸಿದರು. ಪಾರ್ಥಸಾರಥಿ ಧನ್ಯವಾದವಿತ್ತರು.

ವಿಜಯಾಬ್ಯಾಂಕ್  ಸಂಸ್ಥಾಪಕರ ದಿನಾಚರಣೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English