ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ : ಭಾವನಾ

5:59 PM, Friday, May 3rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Bhavanaಬಂಟ್ವಾಳ : ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ್ ರೈ ಪರ ಗುರುವಾರ ಚಿತ್ರನಟಿ ಭಾವನ ಬಂಟ್ವಾಳ ದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬಿ.ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ಕ್ಷೇತ್ರದ ಜನತೆಯ ಮನಸ್ಸನ್ನು ಅರ್ಥೈಸಿಕೊಂಡವರು ನಾಯಕರಾಗಬೇಕು.  ರಮಾನಾಥ ರೈ ಒಬ್ಬ ಕ್ರಿಯಾಶೀಲ ಹಾಗು ಅನುಭವಿ ರಾಜಕಾರಣಿಯಾಗಿದ್ದು ೫ ಬಾರಿ ಶಾಸಕರಾಗಿ, ಮಂತ್ರಿಗಳೂ ಆಗಿದ್ದು,  ಕ್ಷೇತ್ರದ ಜನರನ್ನು ಅರಿತವರು, ಜನರಿಗೂ ಇವರ ಬಗ್ಗೆ ತಿಳಿದಿದ್ದು ಮತದಾರರ ಆಶಿರ್ವಾದದಿಂದ ಈ ಬಾರಿಯೂ ಅವರು ಗೆಲುವನ್ನು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Bhavanaಬಿಸಿ ರೋಡಿನ ಪಕ್ಷದ ಕಚೇರಿಗೆ ಭಾವನಾ ಆಗಮಿಸಿದ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮಲ್ಲಿಗೆ ಹಾರವನ್ನು ಹಾಕಿ ಸ್ವಾಗತಿಸಿದರು. ಕಾಂಗ್ರೆಸ್ ಗೆಲುವು ರಾಜ್ಯಕ್ಕೆ ಅನಿವಾರ್ಯ. ಅದಕ್ಕಾಗಿ ಪ್ರಯತ್ನಿಸಿ, ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದು ಭಾವನಾ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ, ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಬಿ.ಎಚ್. ಖಾದರ್, ಸುದರ್ಶನ್ ಜೆನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಪಿಯೂಸ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
Bhavana

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English