ಮಂಗಳೂರು ರಥಬೀದಿಯಲ್ಲಿ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಬಲಿ

8:12 PM, Friday, June 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

Auto Driver Diedಮಂಗಳೂರು : ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಬಳಿ ರಿಕ್ಷಾ  ಚಾಲಕರೊಬ್ಬರು ದಾರಿ ಮಧ್ಯದಲ್ಲಿ ರಿಕ್ಷಾವನ್ನು ನಿಲ್ಲಿಸಿ  ಹೃದಯಾಘಾತದಿಂದ  ಸ್ಥಳದಲ್ಲೇ  ಬಿದ್ದು  ಮೃತಪಟ್ಟ ಘಟನೆ  ಇಂದು ನಡೆದಿದೆ.

ಆಟೊ ರಿಕ್ಷಾದ ಚಾಲಕ ಸುರೇಶ್(43) ಮೃತಪಟ್ಟವರಾಗಿದ್ದು  ಅವರು ಮಂಗಳಾದೇವಿ ಬೋಳಾರದ ನಿವಾಸಿಯಾಗಿದ್ದಾರೆ.  ನಗರದ ವಿಶ್ವಭವನದ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಕೆ.ಎ.19ಸಿ 2373 ನೋಂದಣಿ ಸಂಖ್ಯೆಯ ಆಟೋವನ್ನು ಪಾರ್ಕ್ ಮಾಡುತ್ತಿದ್ದರು. ಇಂದು ರಥಬೀದಿಗೆ ತಮ್ಮ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಸಂದರ್ಭದಲ್ಲಿ  ತೀವ್ರ ತೆರನಾದ ಎದೆನೋವು ಕಾಣಿಸಿಕೊಂಡು ದಾರಿಮಧ್ಯೆಯೇ ರಿಕ್ಷಾವನ್ನು ನಿಲ್ಲಿಸಿದರು.

ಕೆಳಕ್ಕುರುಳಿದ  ಸುರೇಶ್  ಅವರನ್ನು ಆಸುಪಾಸಿನಲ್ಲಿದ್ದ ಸಾರ್ವಜನಿಕರು ಉಪಚರಿಸಿದರಾದರಾದರೂ ಸುರೇಶ್ ಮೃತಪಟ್ಟಿದ್ದರು. ಬಂದರು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವೆನ್ ಲಾಕ್ ಶವಾಗಾರಕ್ಕೆ ತಲುಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English