ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

2:31 PM, Thursday, June 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

N Prakash visited the KMC Hospital

ಮಂಗಳೂರು : ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರನ್ನು ಇಂದು ಜಿಲ್ಲಾಧಿಕಾರಿ ಶ್ರೀ ಎನ್. ಪ್ರಕಾಶ್ ಅವರು ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಜ್ವರ ಪೀಡಿತರ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಶುಶ್ರೂಸೆ ನೀಡಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚನೆ ನೀಡಿದರು.

ನಗರದ ಅತ್ತಾವರದಲ್ಲಿ ಒಟ್ಟು ಏಳು ಜನರು  ಡೆಂಗ್ಯೂ ಪೀಡಿತರಾಗಿದ್ದಾರೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಅವರನ್ನು ವೀಕ್ಷಿಸಲು ತೆರಳಿದ ಜಿಲ್ಲಾಧಿಕಾರಿ ರೋಗ ಪೀಡಿತರಿಗೆ ನೀಡಿರುವ  ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದರು.  ಇಬ್ಬರನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಪುತ್ತೂರಿನ ಕರುಣಾಕರ ಅವರಿಗೆ ನೆಗೆಟಿವ್ ವರದಿ ಬಂದಿದೆ.  ಇನ್ನು ಉಳಿದ ಮೂವರು ಕೇರಳದ ಕಾಂಞಗಾಡು ಹಾಗೂ ನಿಲೇಶ್ವರದ ನಿವಾಸಿಗಳು, ಇನ್ನೊಬ್ಬರು ಪುತ್ತೂರು  ಬೆಟ್ಟಂಪಾಡಿಯ ಅಬೂಬಕ್ಕರ್ ಎಂಬುವವರು ಹಾಗೂ ಮತ್ತೊಬ್ಬರು ಸುಳ್ಯದ ತಮ್ಮಪ್ಪ ಎನ್ನುವವರು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತಿದ್ದು ಗುಣಮುಖರಾಗುತ್ತಿದ್ದಾರೆ.

N Prakash  visited the KMC Hospital

N Prakash visited the KMC Hospital

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English