ವ್ಯಂಗ್ಯಚಿತ್ರದಿಂದ ರಾಜಕಾರಣಿಗೆ ಎಚ್ಚರಿಕೆ : ನಳಿನ್

8:12 PM, Friday, July 5th, 2013
Share
1 Star2 Stars3 Stars4 Stars5 Stars
(No Ratings Yet)
Loading...

Cartoonistಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ವ್ಯಂಗ್ಯ ಚಿತ್ರ ಪ್ರದರ್ಶನದ ಸಮಾರೋಪ ದಿನವಾದ ಶುಕ್ರವಾರ ಸಂಸದ ನಳಿನ್ಕುಮಾರ್ ಭೇಟಿ ನೀಡಿ ವ್ಯಂಗ್ಯಚಿತ್ರಗಳನ್ನು ವೀಕ್ಷಿಸಿದರು.

`ವ್ಯಂಗ್ಯಚಿತ್ರಕಾರರು ತಮ್ಮ ರೇಖೆಗಳ ಮೂಲಕವೇ ರಾಜಕಾರಣಿಗಳಿಗೆ ಚಾಟಿ ಬೀಸುತ್ತಾರೆ. ಜನ ಪ್ರತಿನಿಧಿಗಳನ್ನು ಎಚ್ಚರಿಸುವ , ಸಮಾಜದ ಕೆಡುಕುಗಳನ್ನು ತಿದ್ದುವ ಕಾರ್ಯವೂ ವ್ಯಂಗ್ಯಚಿತ್ರಗಳಿಂದ ನಡೆಯುತ್ತಿದೆ. ಪ್ರದರ್ಶನ ಮೂಲಕ ಕರಾವಳಿಯ ಖ್ಯಾತ ಕಾರ್ಟೂನಿಸ್ಟ್ ಗಳ ವ್ಯಂಗ್ಯಚಿತ್ರಗಳನ್ನು ಒಂದೆಡೆ ವೀಕ್ಷಿಸಲು ಅವಕಾಶ ನೀಡಿರುವುದು ಶ್ಲಾಘನೀಯ ಎಂದು ಸಂಸದರು ಈ ಸಂದರ್ಭ ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಸಿದ್ದ ವ್ಯಂಗ್ಯ ಚಿತ್ರಕಾರರಾದ ಹರಿಣಿ, ಜೀವನ್ ಶೆಟ್ಟಿ, ಚಿತ್ರಮಿತ್ರ (ಪ್ರಶಾಂತ್ ಶೆಟ್ಟಿ), ಉದ್ಯಮಿ ರಾಜಗೋಪಾಲ್ ರೈ  ಉಪಸ್ಥಿತರಿದ್ದರು.

ಪತ್ರಿಕಾ ದಿನಾಚರಣೆ ಅಂಗವಾಗಿ ನಗರ ಪತ್ರಿಕಾ ಭವನದಲ್ಲಿ  5 ದಿನಗಳ ಕಾಲ ನಡೆದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕರಾವಳಿಯ 29 ಕಾರ್ಟೂನಿಸ್ಟ್ ಗಳ 80ಕ್ಕೂ ಅಧಿಕ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡವು.

Cartoonist

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English