ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆ

8:38 PM, Tuesday, July 9th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Kannady Ajith Hegdeಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ, ಕನ್ನಾಡಿ ಅಜಿತ್ ಹೆಗ್ಡೆಯವರನ್ನು ನೂತನ ಸರಕಾರ ನಿಯುಕ್ತಿಗೊಳಿಸಿದೆ.

ಕನ್ನಾಡಿ ಅಜಿತ್ ಹೆಗ್ಡೆಯವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನವೆಂಬರ್ 2011 ರಂದು ಆಧಿಕಾರ ವಹಿಸಿಕೊಂಡಿದ್ದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲಸಮಾಡುವ ಮುನ್ನ ಅಜಿತ್ ಹೆಗ್ಡೆಯವರು ಬೆಂಗಳೂರಿನಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಉಡುಪಿ ನಗರ ಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಘಟಕದ ಕಾರ್ಯನಿರ್ವಣಾಧಿಕಾರಿಯಾಗಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ವರ್ಷ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ ಜುಲೈ 10 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ತೆರವುಗೊಂಡ ಸ್ಥಾನಕ್ಕೆ ರೇಣುಕಾ ಪ್ರಸಾದ್ ಬರುವ ಸಾಧ್ಯತೆಗಳಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English