ಮೂಡಬಿದ್ರೆ: ಜೂನ್ 17ರಂದು ರಾತ್ರಿ ಮೂಡಬಿದ್ರೆಯ ಗುರು ಬಸದಿಯಲ್ಲಿ ಬೆಲೆಬಾಳುವ ವಿಗ್ರಹಗಳನ್ನು ಕಳವು ಮಾಡಿದ್ದ ಇಬ್ಬರು ವಿಗ್ರಹಕಳ್ಳರನ್ನು ಕೋಲಾರ ಪೊಲೀಸರು ಶುಕ್ರವಾರ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಬಂಧಿಸಿದ್ದಾರೆ.
ಕರ್ನಾಟಕ ಗಡಿಪ್ರದೇಶವಾದ ಕರ್ನೂಲ್ ನಲ್ಲಿ ಒರಿಸ್ಸಾ ಮೂಲದ ದಾಸ್ ಮತ್ತು ಪ್ರಮೋದ್ ಎಂಬವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಶ್ರೀ ಆದಿನಾಥ ಸ್ವಾಮಿ ಪಂಚಲೋಹದ ವಿಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪಂಚಲೋಹದ ವಿಗ್ರಹದ ಮೌಲ್ಯ ಸುಮಾರು ಒಂದು ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಕಳ್ಳತನವಾಗಿರುವ ಇತರ ವಿಗ್ರಹಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.
Click this button or press Ctrl+G to toggle between Kannada and English