ಮಂಗಳೂರು : ಕಾರ್ಕಳ ತಾಲೂಕು ರೆಂಜಾಳ ಗ್ರಾಮದಲ್ಲಿ ಜೂ.3ರಂದು ಕೊಲೆಯಾದ ಪೂರ್ಣಿಮಾ ಶೆಟ್ಟಿ ಪ್ರಕರಣದ ಆರೋಪಿಗಳಾದ ಅಮರೀಶ್, ಸುಧಾಕರ್ ಶೆಟ್ಟಿ, ಗುರುಪ್ರಸಾದ್, ಭಾಸ್ಕರ್ ಪೂಜಾರಿ ಹಾಗೂ ಪ್ರವೀಣ್ ತೌರು ಇವರಿಗೆ ಮೂಡುಬಿದರೆ ನ್ಯಾಯಾಲಯ ಜಾಮೀನು ನೀಡಿದೆ.
ತನ್ನ ಸ್ನೇಹಿತರ ಸಹಕಾರದೊಂದಿಗೆ ಪ್ರಭಾಕರ್ ಶೆಟ್ಟಿ ಪೂರ್ಣಿಮಾಳನ್ನು ಕೊಲೆ ಮಾಡಿ, ದೇಹವನ್ನು ಬಟ್ಟೆಯಲ್ಲಿ ಸುತ್ತಿ ಮಾಸ್ತಿಕಟ್ಟೆಯ ಇಂಗುಗುಂಡಿಯಲ್ಲಿ ಹೂತು ಹಾಕಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
Click this button or press Ctrl+G to toggle between Kannada and English