ಮಂಗಳೂರು : ಮಂಗಳೂರು ತಹಶೀಲ್ದಾರ್ ಲಂಬಾಣಿ ನೇತೃತ್ವದಲ್ಲಿ ಕಂಕನಾಡಿ ಕುದ್ಕೋರಿಗುಡ್ಡೆಯ ಮನೆಯೊಂದಕ್ಕೆ ದಾಳಿ ನಡೆಸಿ ಅಕ್ರಮ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ 17 ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕುದ್ಕೋರಿಗುಡ್ಡೆಯ ರಾಧಾಕೃಷ್ಣ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ದಾಳಿ ನಡೆಸದಾಗ ಆತನ ಮನೆಯಲ್ಲಿ 3 ಗೃಹ ಬಳಕೆಯ ಸಿಲಿಂಡರ್, 4 ವಾಣಿಜ್ಯ ಬಳಕೆಯ ಸಿಲಿಂಡರ್ ಮತ್ತು 10 ಕಿಟ್ಗಳನ್ನು ಪತ್ತೆ ಪತ್ತೆಯಾಗಿದೆ.
ಈತ ತನ್ನ ಮನೆಯಲ್ಲಿ ಅಕ್ರಮವಾಗಿ ಆಟೋ ಸಿಲಿಂಡರ್ಗಳಿಗೆ ಗ್ಯಾಸ್ನ್ನು ತುಂಬಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English