ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿ 67,640 ರೂ ಅನಧಿಕೃತ ಹಣ ವಶ

9:33 PM, Monday, November 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿಗೆ ಇಂದು ಸಂಜೆ 5.30ಕ್ಕೆ ಕಾರವಾರ, ಉಡುಪಿ ಮತ್ತು ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 67,640 ರೂ ಅನಧಿಕೃತ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿ ದ್ವಿತೀಯ ದರ್ಜೆಯ ಗುಮಾಸ್ತರಾದ ಯೋಗೀಶ್ ಮತ್ತು ಪ್ರಭಾಕರ ಸೇರಿದಂತೆ ಆರ್.ಟಿ.ಓ ಕಛೇರಿಯ ಖಾಸಗಿ ಏಜೆಂಟರಾದ ಕೇಶವ ಪೈ, ನಾಗರಾಜ, ರಘುನಾಥ ಹಾಗೂ ಸಂತೋಷ್ ಎಂಬವರನ್ನು ಬಂಧಿಸಲಾಗಿದೆ.

ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿಲೋಕಾಯುಕ್ತ ಎಸ್.ಪಿ ಜಗಮಯ್ಯನವರ್ ನೇತೃತ್ವದಲ್ಲಿ ಉಡುಪಿ ಡಿವೈಎಸ್ಪಿ, ಪ್ರಭುದೇವ ಮಾಣೆ, ಇನ್ಸ್ಫೆಕ್ಟರ್ ಉದಯ ನಾಯಕ್ ದಾಳಿನಡೆಸಿದ್ದಾರೆ. ಬಂದಿತ ಆರೋಪಿಗಳನ್ನು ವಿಚಾರಣೆ ನಡೆಸಿ ಕಾನೂನು ರಿತ್ಯಾ ಕ್ರಮ ಜರಗಿಸಲಾಗುವುದು ಎಂದು ಎಸ್.ಪಿ ಜಗಮಯ್ಯನವರ್ ತಿಳಿಸಿದ್ದಾರೆ.

ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿಕಾರ್ಯಾಚರಣೆಯಲ್ಲಿ ಕಾರವಾರ, ಉಡುಪಿ, ಮಂಗಳೂರಿನ 25 ಮಂದಿ ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು.

ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿ

1 ಪ್ರತಿಕ್ರಿಯೆ - ಶೀರ್ಷಿಕೆ - ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿ 67,640 ರೂ ಅನಧಿಕೃತ ಹಣ ವಶ

  1. xubrqqpivp, ehuirxnhnkzt.com/

    40jP7D ksnbbxtydmhb, [url=http://cbhadlwlxfev.com/]cbhadlwlxfev[/url], [link=http://kgrtvdfxhzdu.com/]kgrtvdfxhzdu[/link], http://vqvtysqihage.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English