ಹೈಟೆನ್ಸನ್ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಮ್ಯಾಕಾನಿಕಲ್ ಇಂಜಿನಿಯಾರ್ ವಿದ್ಯಾರ್ಥಿ

5:55 PM, Tuesday, September 17th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

yatheshtಮಂಗಳೂರು : ಬಜಪೆ ವಿಮಾನ ನಿಲ್ದಾಣದ ಸಮೀಪವಿರುವ ಕೆಂಜಾರಿನ ಕಾಲೇಜಿನ ದ್ವಿತೀಯ ವರ್ಷದ ಮ್ಯಾಕಾನಿಕಲ್ ಇಂಜಿನಿಯಾರ್ ವಿದ್ಯಾರ್ಥಿ ಮುಂಬಾಯಿ ಮೂಲದ ಯಜ್ನೇಶ್ ಶೆಟ್ಟಿ (20) ಹೈಟೆನ್ಸನ್ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಘಟನೆ ಭಾನುವಾರ ರಾತ್ರಿ ಕುದ್ರೊಳಿ ಸಮೀಪ ಸಂಭವಿಸಿದೆ.

ಮಲೇರಿಯ ಜ್ವರ ಭಾದೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ನೋಡಲು ತನ್ನ ಸ್ನೇಹಿತನ ಜೊತೆ ಬಾನುವಾರ ರಾತ್ರಿ ನಗರದ ಕುದ್ರೋಳಿ ಸಮೀಪದ ಉಳ್ಳಾಲ ನರ್ಸಿಂಗ್ ಹೋಮ್ ಆಸ್ಪತ್ರೆಗೆ ತೆರಳಿದ ಯಜ್ನೇಶ್ ಶೆಟ್ಟಿ ಆಸ್ಪತ್ರೆ ಕಿಟಕಿ ಸಮೀಪ ತನ್ನ ಕೈಯನ್ನು ಹೊರ ಚಾಚಿದಾಗ ಕಿಟಕಿ ಪಕ್ಕದಲ್ಲೇ ಹಾದು ಹೋಗಿದ್ದ ಐಟೆನ್ಸ್‌ನ್ ವಿದ್ಯುತ್ ವಯರ್‌ಗೆ ಕೈ ತಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಯುವಕನ ಶವವನ್ನು ಶವ ಪರೀಕ್ಷೆ  ಬಳಿಕ ಮುಂಬಾಯಿಗೆ ಕರೆದೊಯ್ಯಲಾಗಿದೆ.

ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English