ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ

4:56 PM, Wednesday, December 1st, 2010
Share
1 Star2 Stars3 Stars4 Stars5 Stars
(No Ratings Yet)
Loading...

ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರುಮಂಗಳೂರು: ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರು ಇದರ ವತಿಯಿಂದ ನಗರದ ಪುರಭವನದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು  ಇಂದು ಬೆಳಿಗ್ಗೆ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಸಂಸದ. ನಳಿನ್ ಕುಮಾರ್ ಕಟೀಲು, ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಏಡ್ಸ್ ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಆಗಬೇಕು, ಸಾಮಾಜಿಕ ಜಾಗೃತಿಯೊಂದಿಗೆ. ತ್ಯಾಗ, ಸಮರ್ಪಣಾಭಾವ ಮತ್ತು ಸಾಮಾಜಿಕ ಕಳಕಳಿ ಶಿಕ್ಷಣ ಸಂಸ್ಥೆಗಳಿಗೆ ಇರಬೇಕು ಎಂದು ಹೇಳಿದರು.

ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರುಮುಖ್ಯ ಅತಿಥಿಗಳಾಗಿ ಎ.ಜೆ ಮೆಡಿಕಲ್ ಕಾಲೇಜಿನ  ಚರ್ಮ ರೋಗ ತಜ್ಞ ಡಾ. ನರೇಂದ್ರ ಜೆ. ಶೆಟ್ಟಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ  ಮಂಜುನಾಥ್ ಭಂಡಾರಿ ಅಧ್ಯಕ್ಷರು, ಸಹ್ಯಾದ್ರಿ ಸಂಸ್ಥೆ, ಐರಿನ್ ವೇಗಸ್ ಪ್ರಿನ್ಸಿಪಾಲ್ ಆಫ್ ನರ್ಸಿಂಗ್ ಸಯನ್ಸ್ ಸಹ್ಯಾದ್ರಿ ಕಾಲೇಜು,  ಡಿ.ಎಲ್ ಪ್ರಭಾಕರ್ ಪ್ರಿನ್ಸಿಪಾಲ್ ಆಫ್ ಇಂಜಿನಿಯರಿಂಗ್ ಕಾಲೇಜು,  ಬೆನೆಡಿಕ್ಟ್, ಶಾಲಾ ಮುಖ್ಯೋಪಾಧ್ಯಾಯಿನಿ, ಸಹ್ಯಾದ್ರಿ, ಮೊದಲಾದವರು ಉಪಸ್ಥಿತರಿದ್ದರು.

ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರುನೀತಾ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು,  ಐರಿನ್ ವೇಗಸ್ ಪ್ರಿನ್ಸಿಪಾಲ್ ಆಫ್ ನರ್ಸಿಂಗ್ ಸಯನ್ಸ್ ಸಹ್ಯಾದ್ರಿ ಕಾಲೇಜು ಸ್ವಾಗತಿಸಿದರು. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ಏಡ್ಸ್ ಕುರಿತಾದ ಬೀದಿ ನಾಟಕ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆದುವು.
ಸಹ್ಯಾದ್ರಿ ಆರೋಗ್ಯ ವಿಜ್ಞಾನ ಅಧ್ಯಯನ ಶಿಕ್ಷಣ ಸಂಸ್ಥೆ ಮಂಗಳೂರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English