ರೈತರಿಂದ ಮುತ್ತಿಗೆ : ಸಚಿವ ಯುಟಿ ಖಾದರ್

1:31 PM, Tuesday, March 4th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

U.T.-Khadarಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್‌ ಎತ್ತಿನ ಹೊಳೆ ಯೋಜನೆ ವಿರುದ್ಧ ಮಾತನಾಡಿದ ಅವರಿಗೆ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು  ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆದಿದೆ.

ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ  ಪಂಚಾಯತ್‌ ಕಛೇರಿಗೆ ಆಗಮಿಸುತ್ತಿದ್ದ ಸಚಿವರ ವಿರುದ್ಧ  ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು  ಕಪ್ಪು ಬಾವುಟ  ಪ್ರದರ್ಶಿಸಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಖಾದರ್‌ ಅವರು ಎತ್ತಿನಹೊಳೆ ಯೋಜನೆಜಾರಿಗೆ ನನ್ನ ಸಹಮತವಿದೆ,ಯೋಜನೆ ವಿರೋಧಿಸುವವರ ಮನವೋಲಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ಯೋಜನೆ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಆಗಿರುವ ಯೋಜನೆ ಎಂದು ಹೇಳಿ ಜಾಣತನ ತೋರಿದರು.

ಈ ಯೋಜನೆಯ ಸಾಧಕ ಭಾದಕದ ಬಗ್ಗೆ ಚರ್ಚೆ ಯಾಗಬೇಕಿದೆ,ಯೋಜನೆಯಿಂದ ತೊಂದರೆಯಾದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English