ನಟಿ ಜೂಹಿ ಚಾವ್ಲಾ , ರಂಜಿತಾರಿಂದ ನಿತ್ಯಾನಂದನ ಪಾದಪೂಜೆ

10:25 PM, Saturday, January 1st, 2011
Share
1 Star2 Stars3 Stars4 Stars5 Stars
(No Ratings Yet)
Loading...

Nityanandaಬೆಂಗಳೂರು : ಹೊಸ ವರ್ಷದ ಸಂಭ್ರಮದ ನಡುವೆಯೇ  ನಿತ್ಯಾನಂದ ಸ್ವಾಮಿ  ಆನಂದೋತ್ಸವದ ಹೆಸರಿನಲ್ಲಿ ತನ್ನ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರು ಬಿಡದಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಆಶ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ನಿತ್ಯಾನಂದ ಸ್ವಾಮಿಯನ್ನು  ಆಶ್ರಮಕ್ಕೆ ಕರೆ ತಂದು ಪಾದಪೂಜೆ ನಡೆಸಲಾಯಿತು. ಜೂಹಿ ಚಾವ್ಲಾ ಕುಟುಂಬ ಕೂಡ ಪಾದಪೂಜೆ ನಡೆಸಿದರು .
ಕಳೆದ ಎರಡು ವರ್ಷಗಳಿಂದ ಆನಂದೋತ್ಸವದ ಹೆಸರಿನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿತ್ಯಾನಂದ ಸ್ವಾಮಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಘಟಾನುಘಟಿ ರಾಜಕಾರಣಿಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸುತ್ತಿದ್ದ. ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ನಟ ವಿಷ್ಣುವರ್ಧನ್, ಮಾಳವಿಕಾ-ಅವಿನಾಶ್ ದಂಪತಿಗಳು, ತಾರಾ ಹೀಗೆ ತಾರೆಯರು ಸೇರಿದಂತೆ ರಾಜಕಾರಣಿಗಳು ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ನಟಿ ಜೂಹಿ ಚಾವ್ಲಾ ಹೊರತು ಪಡಿಸಿ, ಗಣ್ಯ ವ್ಯಕ್ತಿಗಳ್ಯಾರು ಭಾಗವಹಿಸಿಲ್ಲ. ನಿತ್ಯಾನಂದನ ಆಪ್ತರನ್ನು ಹೊರತುಪಡಿಸಿದರೆ, ಸ್ಥಳೀಯರು ಕೂಡ ನಿತ್ಯನ ಆನಂದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ನಿತ್ಯಾನಂದನ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ರಂಜಿತಾ ಅವರು ಖುದ್ದಾಗಿ ಬಿಡದಿ ಆಶ್ರಮಕ್ಕೆ ತೆರಳಿ ಪಾದಪೂಜೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.  ನಟಿ ರಂಜಿತಾ ಶುಕ್ರವಾರವಷ್ಟೇ ನಗರದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಪತ್ರಿಕಾಗೋಷ್ಠಿ ನಡೆಸಿ ತನ್ನ ಮೇಲಿನ ಆರೋಪ ನಿರಾಕರಿಸಿದ್ದರು.  ಅವಕಾಶ ಸಿಕ್ಕರೆ ಮತ್ತೆ ನಿತ್ಯಾನಂದ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದರು. ಅಲ್ಲದೇ ತಾನು ಎಂದೆಂದಿಗೂ ನಿತ್ಯಾನಂದನ ಭಕ್ತೆಯಾಗಿಯೇ ಇರುವುದಾಗಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English