ಭೋಪಾಲ್: ಛತ್ತೀಸ್ಗಡದಲ್ಲಿ ರಕ್ತದೋಕುಳಿ ಹರಿಸಿದ ನಕ್ಸಲರ ವಿರುದ್ಧ ಸೇಡು ತೀರಿಸಿಯೇ ಸಿದ್ಧ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ. ಬುಧವಾರ ಛತ್ತೀಸ್ಗಡದ ಸುಕ್ಮಾ ಜಿಲ್ಲೆಗೆ ಭೇಟಿ ನೀಡಿದ ಶಿಂದೆ, ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯೇ ಕೈಗೆತ್ತಿಕೊಳ್ಳಲಿದೆ. ನಕ್ಸಲರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತು. ಅವರನ್ನು ಸದೆಬಡಿಯುವುದು ಹೇಗೆ ಎಂದೂ ಗೊತ್ತು ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಅಡ್ಡಿಪಡಿಸಲೆಂದೇ ನಕ್ಸಲರು ಇಂತಹ ಕೃತ್ಯವೆಸಗಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಏತನ್ಮಧ್ಯೆ, ದಾಳಿಯಿಂದ ಮೃತಪಟ್ಟ ಮಧ್ಯಪ್ರದೇಶದ ಮೂವರು ಯೋಧರ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ ತಲಾ 10 ಲಕ್ಷ ಪರಿಹಾರ ಘೋಷಿಸಿದೆ.
Click this button or press Ctrl+G to toggle between Kannada and English