ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಕೆ

12:34 AM, Thursday, March 27th, 2014
Share
1 Star2 Stars3 Stars4 Stars5 Stars
(No Ratings Yet)
Loading...

Poojary

ಮಂಗಳೂರು: ನಾಮಪತ್ರ ಸಲ್ಲಿಸಲು ಕೊನೆಯದಿನವಾದ ಬುಧವಾರ ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಸಿದರು.

ಆರೋಗ್ಯ ಸಚಿವ ಯು ಟಿ ಖಾದರ್‌ ,ಜಿಲ್ಲಾಉಸ್ತುವಾರಿ ಹಾಗೂ ಅರಣ್ಯ ಸಚಿವ ರಮನಾಥ್‌ ರೈ, ಶಾಸಕ ಜೆ. ಆರ್‌ .ಲೋಬೋ, ಮತ್ತು ಮುಖಂಡ ಪಿ ವಿ ಮೋಹನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಮ ಪೂಜಾರಿ ಅವರು, ಜನತೆ ಕೊಮುವಾದಿಗಳನ್ನು ತಿರಸ್ಕರಿಸುವುದು ಖಂಡಿತ ಎಂದರು. ಕಾಂಗ್ರೆಸ್ ಮಾಡಿದ ಅಭಿವ್ರುದ್ದಿ ಕೆಲಸಗಳೇ ನನಗೆ ಗೆಲುವು ನೀಡಲಿದೆ ಎಂದರು.

ಬಿಜೆಪಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಮೋದಿಯ ಹೆಸರು ಮಾತ್ರ ಹೇಳುತ್ತಿದ್ದಾರೆ, ಎಲ್ಲಿಯೂ ಅಭ್ಯರ್ಥಿಗಳ ಬಗ್ಗೆ ಹೇಳುತ್ತಿಲ್ಲ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English