ಕೇಂದ್ರ ರೈಲ್ವೇ ಮಂತ್ರಿ ಡಿ.ವಿ ಸದಾನಂದ ಗೌಡರಿಗೆ ಅಭಿನಂದಿಸಿದ ಕೆ.ಸಿ ಶೆಟ್ಟಿ

11:45 PM, Friday, May 30th, 2014
Share
1 Star2 Stars3 Stars4 Stars5 Stars
(No Ratings Yet)
Loading...
KC Shetty

ಮುಂಬಯಿ : ನಗರದ ಹೆಸರಾಂತ ಕೈಗಾರಿಕೋದ್ಯಮಿ, ಲುಮೆನ್ಸ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಕುತ್ಪಾಡಿ ದೊಡ್ಡಮನೆ ಪಾಟೇಲರ ಮನೆತನದ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ) ಅವರು ತಮ್ಮ ಪರಿವಾರ ಮಿತ್ರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿ ಭರ್ಜರಿ ಮತಗಳಿಂದ ಚುನಾಯಿತರಾಗಿ ಇದೀಗ ಎನ್ಡಿಎ ಸರಕಾರದ ಭಾರತ ರಾಷ್ಟ್ರದ 15ನೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾಗಿ ಆಯ್ಕೆಯಾದ ಡಿ.ವಿ ಸದಾನಂದ ಗೌಡ ಅವರನ್ನು ನವ ದೆಹಲಿಯ ರೈಲ್ವೇ ಭವನದಲ್ಲಿ ಕಳೆದ ಬುಧವಾರ ಭೇಟಿಯನ್ನೀಡಿ ಅಭಿನಂದಿಸಿದರು.

ಮುಖ್ಯಮಂತ್ರಿ ಆಗಿದ್ದ ವೇಳೆ ಕೆ.ಸಿ ಶೆಟ್ಟಿ ಮತ್ತು ಶ್ರೀಮತಿ ಮಲ್ಲಿಕಾ ಚಂದ್ರ ಶೆಟ್ಟಿ ದಂಪತಿಯ ಸುಪುತ್ರಿ ಕು| ರಚನಾ ಶೆಟ್ಟಿ ಮತ್ತು ಬಗ್ಜ್ಜುನ್ ಅವರ ವಿವಾಹದ ಸತ್ಕಾರಕೂಟದಲ್ಲಿ ಸದಾನಂದ ಗೌಡ ಮತ್ತು ಶ್ರೀಮತಿ ದಾಟಿ ಸದಾನಂದ ದಂಪತಿ ಹಾಗೂ ಅವರ ಸುಪುತ್ರ ಕಾರ್ತಿಕ್ ಸದಾನಂದ ಭಾಗವಹಿಸಿರುವುದನ್ನು ನೆನಪಿಸ ಬಹುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English