ಮಂಗಳೂರು: ಪ್ರತೀ ಗ್ರಾಹಕರ ಎದುರೇ ಗ್ಯಾಸ್ ಸಿಲಿಂಡರ್ ತೂಕ ಮಾಡಿ ಕೊಡುವ ಮೂಲಕ ಸುಪ್ರೀಮ್ ಕೋರ್ಟ್ ನ ಆದೇಶವನ್ನು ಪಾಲಿಸಬೇಕು ಎಂದಿರುವ ದ.ಕ.ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಸ್ವಾಗತಿಸಿದೆ.
ಇದರಿಂದ ಗ್ರಾಹಕರಿಗೆ ತಮಗೆ ಸರಿಯಾಗಿ ತೂಗಿ ಕೊಡಲಾಗುತ್ತಿದೆ ಎಂಬ ವಿಶ್ವಾಸ ಮೂಡುವುದಲ್ಲದೆ ಗ್ಯಾಸ್ ಕಡಿಮೆ ಮಾಡಿ ಕೊಡಲಾಗುತ್ತದೆ ಎಂಬ ದೂರುಗಳಿಗೆ ಕಡಿವಾಣ ಹಾಕಬಹುದಾಗಿದೆ.
ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಈ ಬೇಡಿಕೆಯನ್ನು ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದೆಯಾದರೂ ಅದರ ಜಾರಿಗೆ ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವ ಅನಿವಾರ್ಯತೆಯನ್ನು ತಂದೊಡ್ಡಿದೆ. ಆದರೆ, ಇದು ಹೇಳಿಕೆಗೆ ಮಾತ್ರ ಸೀಮಿತವಾಗದೆ ಕಾರ್ಯರೂಪಕ್ಕಿಳಿಸುವಲ್ಲಿ ಜಿಲ್ಲಾಧಿಕಾರಿಯವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಧರ್ಮೇಂದ್ರ ಕೆ. ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English