ಕಣ್ವತೀರ್ಥ ಮನೆಗೆ ಪೇಜಾವರ ಶ್ರೀ ಭೇಟಿ

8:33 PM, Thursday, January 14th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kanwa Tirtha

ಮಂಜೇಶ್ವರ: ಪೇಜಾವರ ಮಠಾಧೀಶ ಶ್ರೀ ವಿಶೇಷತೀರ್ಥ ಶ್ರೀಪಾದರು ಬುಧವಾರ ರಾತ್ರಿ ಕಣ್ವತೀರ್ಥ ಮಧುಸೂದನ ಆಚಾರ್ಯರ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,ಪ್ರದೀಪ್ ಕುಮಾರ್ ಕಲ್ಕೂರ,ಸುಧಾಕರ ರಾವ್ ಪೇಜಾವರ,ಉದಯಕುಮಾರ್ ಕಣ್ವತೀರ್ಥ,ಪುರುಷೋತ್ತಮ ಮಂಜೇಶ್ವರ,ಸುನಂದಾ ಆಳ್ವ ಉಪಸ್ಥಿತರಿದ್ದು, ಶ್ರೀಗಳನ್ನು ಗೌರವಾದಾರಗಳಿಂದ ಬರಮಾಡಿಕೊಂಡರು.

ಮಧುಸೂದನ ಆಚಾರ್ಯ ದಂಪತಿಗಳು ಪಾದಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಶ್ರೀಗಳು ಮುಂದೆ ನಡೆಯಲಿರುವ ಪರ್ಯಾಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭಕ್ತರ ಸಹಕಾರ ಕೋರಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖೇನ ಪರ್ಯಾಯ ಉತ್ಸವಕ್ಕೆ ನೀಡುತ್ತಿರುವ ಸಹಕಾರವನ್ನು ಶ್ರೀಗಳು ಶ್ಲಾಘಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English